Advertisement

66 ದಲಿತ ಕುಟುಂಬಗಳಿಗೆ ಬಿಎಸ್‌ವೈ ಆತಿಥ್ಯ

03:00 AM Jul 05, 2017 | Karthik A |

ಬೆಂಗಳೂರು: ತಮ್ಮ ರಾಜ್ಯ ಪ್ರವಾಸದ ವೇಳೆ ಆತಿಥ್ಯ ಕಲ್ಪಿಸಿದ ಸುಮಾರು 66 ದಲಿತ ಕುಟುಂಬಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಡಾಲರ್ಸ್‌ ಕಾಲನಿಯ ತಮ್ಮ ನಿವಾಸದಲ್ಲಿ ವಿಶೇಷ ಆತಿಥ್ಯ ಕಲ್ಪಿಸಲು ತೀರ್ಮಾನಿಸಿದ್ದಾರೆ. ಈ ಮೂಲಕ ತಾವು ದಲಿತರ ಮನೆಗಳಲ್ಲಿ ಉಪಾಹಾರ ಸೇವಿಸಿದ ಬಗ್ಗೆ  ಪಕ್ಷಗಳು ಮಾಡುತ್ತಿರುವ ಟೀಕೆಗಳಿಗೆ ಸೂಕ್ತ ಉತ್ತರ ನೀಡಲು ಮುಂದಾಗಿರುವ ಅವರು, ತಾವು ದಲಿತರ ಮನೆಗಳಲ್ಲಿ ಹೋಗಿ ಊಟ ಮಾಡಿದ್ದು ಮಾತ್ರವಲ್ಲ, ದಲಿತರನ್ನು ತಮ್ಮ ಮನೆಗೆ ಕರೆಸಿ ಊಟ ಹಾಕಿ ಸತ್ಕರಿಸಿದ್ದೇನೆ. ಹೊಟೇಲ್‌ನಿಂದ ಉಪಾಹಾರ ತರಿಸಿ ದಲಿತರ ಮನೆಗಳಲ್ಲಿ ಸೇವಿಸಿದ್ದಲ್ಲ ಎಂಬ ಸಂದೇಶ ರವಾನಿಸಲು ನಿರ್ಧರಿಸಿದ್ದಾರೆ.

Advertisement

ಯಡಿಯೂರಪ್ಪ ಅವರು ಇದುವರೆಗಿನ ರಾಜ್ಯ ಪ್ರವಾಸದ ವೇಳೆ 27 ಜಿಲ್ಲೆಗಳ 87 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡಿದ್ದು, ಆ ವೇಳೆ ದಲಿತ ಸಮುದಾಯದ 66 ಮನೆಗಳಿಗೆ ಭೇಟಿ ನೀಡಿ ಅಲ್ಲಿ ಊಟ ಮತ್ತು ಉಪಾಹಾರ ಸೇವಿಸಿದ್ದರು. ಯಾರ ಮನೆಗಳಲ್ಲಿ ಅವರಿಗೆ ಆತಿಥ್ಯ ನೀಡಿದರೋ ಅಂಥವರಿಗೆ ತಾವೂ ಆತಿಥ್ಯ ನೀಡಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಈ ಬಗ್ಗೆ ಶೀಘ್ರವೇ ದಿನಾಂಕ ನಿಗದಿಪಡಿಸಲಾಗುವುದು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next