Advertisement

ಬಿಎಸ್‌ವೈ,ಸಿದ್ದು ಹೇಳಿಕೆಗೆ ಉತ್ತರಿಸಲ್ಲ: ಗೌಡ 

07:00 AM May 08, 2018 | |

ಬಾದಾಮಿ: ಜೆಡಿಎಸ್‌ ವಿರುದ್ಧ ಮುಗಿಬಿದ್ದಿರುವ ಸಿಎಂ ಸಿದ್ದರಾಮಯ್ಯ ಹಾಗೂ ಸರಕಾರ ರಚನೆಯಲ್ಲಿ ಜೆಡಿಎಸ್‌ ನಿರ್ಣಾಯಕ ಪಾತ್ರ ವಹಿಸಲು ಸಾಧ್ಯವೇ ಇಲ್ಲ ಎನ್ನುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡ ಹೇಳಿದ್ದಾರೆ.

Advertisement

ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ಗೆ 20 ಸ್ಥಾನ ಬರೋಲ್ಲ ಎಂದು ಬಿಎಸ್‌ವೈ ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ವಾಕ್‌ ಸ್ವಾತಂತ್ರ್ಯ ಇಲ್ಲವೇ? ಯಾರು ಬೇಡ ಅಂತಾರೆ. ಮಾತನಾಡುವ ಹಕ್ಕು ನಮಗೂ ಇದೆ. ಅವರು ಏನು ಮಾತಾಡುತ್ತಾರೆ ಮಾತಾಡಲಿ. ಜನರೇ ತೀರ್ಮಾನ ಕೊಡುತ್ತಾರೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್‌ ಮೇಲೆ ಪ್ರೀತಿ ಇದೆ ಎಂದಷ್ಟೇ ಉತ್ತರಿಸಿದರು.

ನನ್ನನ್ನು ದೇವೇಗೌಡ ಗೆಲ್ಲಿಸಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೂ ಉತ್ತರ ಕೊಡದ ದೇವೇಗೌಡರು, ನನಗೇನೂ ಆತಂಕವಿಲ್ಲ. ಹಲವು ವರ್ಷಗಳಿಂದ ರಾಜ್ಯದ ಜನತೆ ನನ್ನನ್ನು ನೋಡಿದ್ದಾರೆ. ನಾನು ಏನು ಎಂಬುದು ಜನರಿಗೆ ಗೊತ್ತು. ಅವರೇ ತೀರ್ಪು ಕೊಡುತ್ತಾರೆ ಎಂದರು.

ಬನಶಂಕರಿ- ಶಿವಯೋಗ ಮಂದಿರಕ್ಕೆ ಭೇಟಿ 
ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು, ಬಾದಾಮಿ ತಾಲೂಕಿನ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶಿವಯೋಗ ಮಂದಿರಕ್ಕೆ ತೆರಳಿ, ಹಾನಗಲ್‌ ಕುಮಾರೇಶ್ವರ ಶಿವಯೋಗಿಗಳ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next