Advertisement

ಅದಿರು ಲೂಟಿಯಲ್ಲಿ ರೆಡ್ಡಿಯಿಂದ ಬಿಎಸ್‌ವೈಗೆ ಪಾಲು: ಸಿದ್ದರಾಮಯ್ಯ

07:40 AM May 04, 2018 | Team Udayavani |

ದಾವಣಗೆರೆ: ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಯುತ್ತಿದ್ದ ವೇಳೆ ಪ್ರತಿ ಟನ್‌ ಅದಿರಲ್ಲಿ ಶೇ.50 ರಷ್ಟು ಪಾಲನ್ನು ಮುಫತ್ತಾಗಿ ಜನಾರ್ದನ ರೆಡ್ಡಿಗೆ ನೀಡಬೇಕಿತ್ತು.ಇದರಿಂದ ರೆಡ್ಡಿಗೆ ದಿನಕ್ಕೆ 10 ಕೋಟಿ ರೂ. ಆದಾಯ ಇತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

Advertisement

ದಾವಣಗೆರೆ ತಾಲೂಕಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಗಣಿಗಾರಿಕೆ ನಡೆಸುವವರು ಪ್ರತಿ ಟನ್‌ ಅದಿರಿನ ಶೇ. 50ರಷ್ಟು ಪಾಲನ್ನು ಮುಫತ್ತಾಗಿ ಜನಾರ್ದನ ರೆಡ್ಡಿಗೆ ನೀಡಬೇಕಾಗುತ್ತಿತ್ತು. ದಿನಕ್ಕೆ 10 ಕೋಟಿ ಆದಾಯ ಇತ್ತೆಂದರೆ ಅವರು ಎಷ್ಟು ಲೂಟಿ ಹೊಡೆದಿರಬಹುದು. ಅದರಲ್ಲಿ ಯಡಿಯೂರಪ್ಪಗೂ ಪಾಲಿತ್ತು ಎಂದರು.

ಜನಾರ್ದನ ರೆಡ್ಡಿ, ಬಳ್ಳಾರಿಗೆ ಬಾ ನೋಡಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಂತೆ ನಾನು ಪಾದಯಾತ್ರೆ ನಡೆಸಿದೆ. ಎಲ್ಲವೂ ನಿಂತು ಹೋಗಿತ್ತು. ಈಗ ಮತ್ತೆ ಆಲಿಬಾಬಾ-40 ಕಳ್ಳರಂತೆ ಅವರೆಲ್ಲ ಒಂದಾಗಿದ್ದಾರೆ. ಅದೊಂದು ಬಾಗಿಲು ತೆಗಿಯೇ ಶೇಷಮ್ಮ… ಎನ್ನುವಂತಾಗಿದೆ ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next