Advertisement

ಬಿಎಸ್‌ವೈ- ನಾನು ರಾಮ- ಲಕ್ಷ್ಮಣರಂತೆ: ಈಶ್ವರಪ್ಪ

06:45 AM Mar 29, 2018 | |

ಶಿವಮೊಗ್ಗ: ತಾವು ಹಾಗೂ ಯಡಿಯೂರಪ್ಪ ಆಪ್ತಮಿತ್ರರು. ಅಣ್ಣ-ತಮ್ಮನಂತೆ, ರಾಮ ಲಕ್ಷ್ಮಣರಿದ್ದಂತೆ. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ. ಗೊಂದಲವೂ ಇಲ್ಲ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ  ಪುನರುಚ್ಚರಿಸಿದರು.

Advertisement

ಹಿಂದೆ ನಮ್ಮಿಬ್ಬರ ನಡುವೆ ಗೊಂದಲ ಇತ್ತೆಂಬುದು ನಿಜ. ಆದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ದಿಲ್ಲಿಯಲ್ಲಿ ಸಭೆ ನಡೆಸಿ ಗೊಂದಲ ನಿವಾರಿಸಿದ್ದರು. ಈಗ ಶಿವಮೊಗ್ಗ ಭೇಟಿ ಸಂದರ್ಭದಲ್ಲಿ ಅಮಿತ್‌ ಶಾ ಅವರು ಈ ಬಗ್ಗೆ ತಮ್ಮಲ್ಲಿದ್ದ ಸಂದೇಹವನ್ನು ದೂರ ಮಾಡಿಕೊಂಡಿದ್ದಾರೆ. ನಮ್ಮಲ್ಲಿನ ಒಗ್ಗಟ್ಟನ್ನು ಕಂಡು ಸಂತಸ ಪಟ್ಟಿದ್ದಾರೆ ಎಂದವರು ಪತ್ರಿಕಾಗೋಷ್ಠಿಯಲ್ಲಿ  ಹೇಳಿದರು.
 ನಮ್ಮ ಮುಂದೆ ಇರುವ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next