Advertisement

ಪ್ರತ್ಯೇಕ ಧರ್ಮ ಮನವಿಗೆ ಬಿಎಸ್‌ವೈ ಕೂಡ ಸಹಿ ಹಾಕಿದ್ದಾರೆ

08:05 AM Jul 30, 2017 | Team Udayavani |

ಮೈಸೂರು: “ಪ್ರತ್ಯೇಕ ವೀರಶೈವ-ಲಿಂಗಾಯಿತ ಧರ್ಮವಾದರೆ ಅವರೆಲ್ಲ ಸನಾತನ ಧರ್ಮದಿಂದ ಹೊರ ಹೋಗುತ್ತಾರೆ ಎಂದು ಬಿಜೆಪಿಯವರಿಗೆ ಭಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ,”ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮವಾಗಲಿ ಎಂದು ನಾವು ಹೇಳಿಲ್ಲ. ಅಖೀಲ ಭಾರತ ವೀರಶೈವ ಮಹಾಸಭಾ ಹಾಗೂ ಮಾತೆ ಮಹಾದೇವಿ ಅವರು ಪ್ರತ್ಯೇಕ ಧರ್ಮದ ಮಾನ್ಯತೆ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಮನವಿ ಮಾಡಿದ್ದರಿಂದ ಎಲ್ಲರೂ ಒಟ್ಟಾಗಿ ಬನ್ನಿ ಎಂದು ಹೇಳಿದ್ದೇನಷ್ಟೆ, ಈ ಸಂಬಂಧ ಸಚಿವರ ಸಮಿತಿಯನ್ನೂ ಮಾಡಿಲ್ಲ. ಅವರೇ ಪ್ರವಾಸ ಹೊರಟಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮವಾಗಲಿ ಎಂದು ಹಿಂದೆ ಬಿ.ಎಸ್‌.ಯಡಿಯೂರಪ್ಪಕೂಡ ಅಖೀಲ ಭಾರತ ವೀರಶೈವ ಮಹಾಸಭಾದ ಮನವಿಗೆ ಸಹಿ ಹಾಕಿದ್ದಾರೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next