Advertisement

ಬಿಎಸ್‌ವೈ ಯಾರಿಗೂ ದ್ರೋಹ ಮಾಡಿಲ್ಲ: ಬಿ.ವೈ.ರಾಘವೇಂದ್ರ

10:59 PM Mar 14, 2024 | Team Udayavani |

ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಯಾರಿಗೂ ದ್ರೋಹ ಮಾಡಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಿಜೆಪಿಗೆ ಶಕ್ತಿ ಇಲ್ಲದ ಸಂದರ್ಭದಲ್ಲಿ ಪಕ್ಷ ಕಟ್ಟುವ ಕೆಲಸ ಮಾಡಿದ್ದಾರೆ. ಅವರು ಯಾವೊಬ್ಬ ಕಾರ್ಯಕರ್ತನಿಗೂ ಅನ್ಯಾಯ ಮಾಡಿಲ್ಲ. ಯಡಿಯೂರಪ್ಪ ಲೋಕಸಭಾ ಚುನಾವಣೆಯಲ್ಲಿ ಸೋತಾಗ ರಾಜ್ಯಸಭೆ ಸದಸ್ಯರನ್ನಾಗಿ ಮಾಡುತ್ತೇವೆ ಬನ್ನಿ ಎಂದರು.

ಆದರೆ ಯಡಿಯೂರಪ್ಪ ಅವರು ನನಗೆ ರಾಜ್ಯಸಭೆ ಬೇಡ ರಾಜಶೇಖರಮೂರ್ತಿ ಅವರನ್ನು ರಾಜ್ಯಸಭೆಗೆ ಅಭ್ಯರ್ಥಿ ಮಾಡಿ ಎನ್ನುವ ಮೂಲಕ ಮುತ್ಸದ್ಧಿತನ ಮೆರೆದಿದ್ದರು. ಈ ಬಾರಿ ಹೊಸ ಮುಖಗಳಿಗೆ ಹೆಚ್ಚಿನ ಅವಕಾಶ ನೀಡಿದ್ದಾರೆ. ರಾಷ್ಟ್ರಭಕ್ತರು ರಾಷ್ಟ್ರದ ಹಿತಕ್ಕೋಸ್ಕರ ಚಿಂತನೆ ಮಾಡುತ್ತಾರೆ. ದೇಶ, ಮೋದಿ ಬಿಟ್ಟು ಬೇರೆ ಚಿಂತನೆ ಮಾಡುವುದಿಲ್ಲ ಎಂದರು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next