Advertisement

ಬಿಎಸ್‌ವೈ ಮಾರ್ಗದರ್ಶನ: ರಾಜ್ಯದಲ್ಲಿ ಪಕ್ಷ ಸಂಘಟನೆ

11:05 PM Oct 18, 2019 | Lakshmi GovindaRaju |

ಮಂಡ್ಯ: “ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ನಾನು ಬೇರೆ ಎಂದು ತಿಳಿದಿಲ್ಲ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲು ಸ್ಪಷ್ಟಪಡಿಸಿದರು. ನಗರದಲ್ಲಿ ಶುಕ್ರವಾರ ಬಿಜೆಪಿ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ಯಡಿಯೂರಪ್ಪನವರ ಮಾರ್ಗದರ್ಶನದಲ್ಲೇ ನಾನು ಪಕ್ಷ ಸಂಘಟನೆ ಮಾಡುತ್ತಿದ್ದು, ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ಯಡಿಯೂರಪ್ಪನವರ ತವರು ಜಿಲ್ಲೆಯಾದ ಮಂಡ್ಯದಿಂದಲೇ ಸಂಘಟನಾ ಪ್ರವಾಸ ಆರಂಭಿಸಿದ್ದೇನೆ’ ಎಂದರು.

Advertisement

ಈಗಾಗಲೇ ದೇಶದ 18 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಮುಂದಿನ ದಿನಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಎಲ್ಲಾ ಜಿಲ್ಲೆಗಳಲ್ಲೂ ಬಿಜೆಪಿ ಅಧಿಕಾರ ಹಿಡಿಯುವುದು ಖಚಿತ. ಅದರಲ್ಲಿ ಮಂಡ್ಯ ಜಿಲ್ಲೆಯೂ ಸೇರಿದೆ. ದೇಶದ 13 ರಾಜ್ಯಗಳಲ್ಲಿ ನೆರೆ ಪರಿಸ್ಥಿತಿ ಇದೆ. ಆದರೆ, ಕರ್ನಾಟಕದಲ್ಲಿ ಯಡಿಯೂರಪ್ಪನವರ ಬೆನ್ನುತಟ್ಟಲು ಕೇಂದ್ರ ಸರ್ಕಾರ ಮೊದಲ ಬಾರಿಗೆ 1,200 ಕೋಟಿ ರೂ.ನೀಡಿದೆ ಎಂದರು.

ಇದು ಕಾಂಗ್ರೆಸ್‌ ಮೈಕೇ…: ಮಂಡ್ಯದ ಗಾಯಿತ್ರಿ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಕಟೀಲು ಅವರು ಮಾತನಾಡುವ ವೇಳೆ ಪದೇಪದೆ ಮೈಕ್‌ ಕೈಕೊಡುತ್ತಿತ್ತು. ಇದರಿಂದ ವಿಚಲಿತರಾದ ಅವರು, ಇದು ಕಾಂಗ್ರೆಸ್‌ ಮೈಕೇ…ಎಂದು ಪ್ರಶ್ನಿಸಿದರು. ಬಿಜೆಪಿಯವರು ಮಾತನಾಡುವುದರಿಂದ ಮೈಕ್‌ಗೆ ಬಹುಶ: ನೋವಾಗುತ್ತಿರಬಹುದು. ಆದ್ದರಿಂದಲೇ ಇದು ಪದೇ ಪದೇ ಕೈ ಕೊಡುತ್ತಿದೆ ಎಂದು ಹಾಸ್ಯಚಟಾಕಿ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next