Advertisement

ಬಿಎಸ್‌ವೈ ಸರ್ಕಾರ ಶೀಘ್ರ ಪತನ

06:59 AM May 30, 2020 | Lakshmi GovindaRaj |

ಮಾಗಡಿ: ಮೂರು ತಿಂಗಳಲ್ಲಿ ಬಿಎಸ್‌ವೈ ಸರ್ಕಾರ ಪತನಗೊಳ್ಳಲಿದೆ ಎಂದು ಸಂಸದ ಡಿ.ಕೆ.ಸುರೇಶ್‌ ಭವಿಷ್ಯ ನುಡಿದರು. ಪಟ್ಟಣದ ಜೆಪಿ ಬಡಾವಣೆಯಲ್ಲಿ ಏರ್ಪಡಿಸಿದ್ದ ಕೆಪಿಸಿಸಿ ಪದಗ್ರಹಣ ಪೂರ್ವ ಸಿದತೆ ಸಭೆ ಅಧ್ಯಕ್ಷತೆ ವಹಿಸಿ  ಮಾತನಾಡಿ, ಬಿಜೆಪಿಯಲ್ಲಿ ಈಗಾಗಲೇ ಭಿನ್ನಮತ ಶುರುವಾಗಿದೆ.

Advertisement

ಬಿಎಸ್‌ವೈ ಸರ್ಕಾರದ ಆಯಸ್ಸು ಕಡಿಮೆಯಾಗಿದೆ. ಮೂರು ತಿಂಗಳೊಳಗೆ ಸರ್ಕಾರ ಪತನಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು. ಮುಂದಿನ ದಿನಗಳಲ್ಲಿ  ಚುನಾವಣೆ ಬರಲಿದೆ. ಹೊಸ ಸರ್ಕಾರ ರಚನೆಯಾಗಲಿದ್ದು, ಕಾಂಗ್ರೆಸ್‌ ಕಾರ್ಯಕರ್ತರು ಸಂಘಟಿತರಾಗಬೇಕು. ಎಲ್ಲೆಡೆ ಜನಜಾಗೃತಿ ಮೂಡಿಸಬೇಕು. ಗ್ರಾಪಂಗಳಿಗೆ ಬಿಜೆಪಿ ನಾಮನಿರ್ದೇಶನ ಮಾಡಿದ್ದೇ ಆದರೆ ಉಗ್ರ ಹೋರಾಟ  ಹಮ್ಮಿಕೊಳ್ಳಬೇಕಾಗುತ್ತದೆ.

ಮುಖ್ಯಮಂತ್ರಿಗಳು ಎಚ್ಚೆತ್ತು ನಾಮನಿರ್ದೇಶನ ಕೈಬಿಡಬೇಕು ಎಂದು ಎಚ್ಚರಿಕೆ ನೀಡಿದರು. ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ, ಪಕ್ಷದ ವೀಕ್ಷಕ ಅನಿಲ್‌ಕುಮಾರ್‌, ಪಿಳ್ಳಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಚಿಗಳೂರು  ಗಂಗಾಧರ್‌, ಗಾಣಕಲ್‌ ನಟರಾಜ್‌, ತಾಪಂ ಅಧ್ಯಕ್ಷ ನಾರಾಯಣಪ್ಪ, ಜೆ.ಪಿ. ಚಂದ್ರೇಗೌಡ, ಸಿ.ಜಯರಾಮ, ವಿಜಯಕುಮಾರ್‌, ಕಮಲಮ್ಮ,

ಎಂ.ಕೆ.ಧನಂಜಯ, ಎಚ್‌.ಎನ್‌. ಅಶೋಕ್‌, ಪುರಸಭೆ ಸದಸ್ಯ ಎಚ್‌.ಜೆ.ಪುರುಶೋತ್ತಮ್‌, ಎಚ್‌.ಆರ್‌.ಮಂಜುನಾಥ್‌,ತೋ.ವಿ.ಗಿರೀಶ್‌, ಬಿ.ಎಸ್‌.ಕುಮಾರ್‌,ವೆಂಕಟೇಶ್‌, ಧನಂಜಯ ನಾಯ್ಕ, ದೊಡ್ಡಿ ವಿಶ್ವನಾಥ್‌,ಬಾಲರಾಜು, ಶೇಖರ್‌, ಸುರೇಂದ್ರ,ಎಂ.ಆರ್‌.ಮಂಜುನಾಥ್‌, ಕಿರಣ್‌, ಇನಾಯಿತ್‌ ಉಲ್ಲಾ,ರಿಯಾಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next