Advertisement

ಬಿಎಸ್‌ವೈ ಸರ್ಕಾರಕ್ಕೆ ಸದ್ಯ ಸಮಸ್ಯೆ ಇಲ್ಲ: ಕೋಡಿಮಠ ಶ್ರೀ

09:17 AM Feb 06, 2020 | Sriram |

ಹುಬ್ಬಳ್ಳಿ: ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸದ್ಯ ಯಾವುದೇ ಸಮಸ್ಯೆ ಕಾಣುತ್ತಿಲ್ಲ. ಆತಂಕ ಪಡುವ ಅವಶ್ಯಕತೆಯೂ ಇಲ್ಲ ಎಂದು ಹಾಸನ ಜಿಲ್ಲೆ ಅರಸಿಕೆರೆ ತಾಲೂಕು ಹಾರನಹಳ್ಳಿ ಕೋಡಿಮಠದ ಡಾ| ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದರು.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸ್ಥಾನಕ್ಕಾಗಿ ಯಾರೇ ಎಷ್ಟೇ ಒತ್ತಡ ಹಾಕಿದರು ಯಡಿಯೂರಪ್ಪ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಎಲ್ಲವೂ ಸರಿಯಾಗುತ್ತದೆ. ಸುಸೂತ್ರವಾಗಿ ಆಡಳಿತ ನಡೆಸುತ್ತಾರೆ. ಯುಗಾದಿ ನಂತರ ಸರ್ಕಾರದ ಬಗ್ಗೆ ತಿಳಿಯುತ್ತದೆ ಎಂದರು.

ಅಯೋಧ್ಯೆಯಲ್ಲಿ ರಾಮ ಮಂದಿರ ಆಗಬೇಕು. ಅದು ಆಗುತ್ತದೆ. ಬಹುಸಂಖ್ಯಾತರ ಇಷ್ಟಾರ್ಥ ಈಡೇರಿಸುವುದು ದೇಶ ಆಳುವವರ ಕರ್ತವ್ಯ ಆಗಿದೆ. ಅದನ್ನು ಅವರು ಮಾಡುತ್ತಾರೆ. ಅಲ್ಲದೆ ಸಿಎಎ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next