Advertisement

ಚುನಾವಣಾ ರಾಜಕೀಯದಿಂದ ಬಿಎಸ್ ವೈ ದೂರ : ಕಣ್ಣೀರಿಟ್ಟ ರೇಣುಕಾಚಾರ್ಯ

07:57 PM Jul 22, 2022 | Team Udayavani |

ಚಿತ್ರದುರ್ಗ: ಚುನಾವಣಾ ರಾಜಕೀಯದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಿಂದೆ ಸರಿದಿದ್ದನ್ನು ನೆನೆದು ಹೊನ್ನಾಳಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕಣ್ಣೀರಿಟ್ಟ ಘಟನೆ ಚಿತ್ರದುರ್ಗದಲ್ಲಿ ಶುಕ್ರವಾರ ನಡೆಯಿತು.

Advertisement

ಶುಕ್ರವಾರ ಸಂಜೆ ನಗರದ ಹೊರವಲಯದ ಶ್ರೀ ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.ಬಿ.ಎಸ್. ಯಡಿಯೂರಪ್ಪ ಅವರ ಹೆಸರು ಕೇಳಿದರೆ ಮೈ ರೋಮಾಂಚನ ಆಗುತ್ತದೆ. ಎಲ್ಲೋ ಇದ್ದ ನನ್ನ ಬೆನ್ನು ತಟ್ಟಿ ರಾಜಕೀಯಕ್ಕೆ ತಂದವರು, ರಾಜ್ಯದಲ್ಲಿ ನನ್ನಂತೆ ಅನೇಕರನ್ನು ಯಡಿಯೂರಪ್ಪ ಬೆಳೆಸಿದ್ದಾರೆ ಎಂದರು.

ರಾಜ್ಯ ರಾಜಕಾರಣದಲ್ಲಿ ಯಡಿಯೂರಪ್ಪ ಇಲ್ಲದ್ದನ್ನ ನಾನು ನೋಡಲು ಕೂಡಾ ಸಾಧ್ಯವಿಲ್ಲ ಎನ್ನುತ್ತಲೇ ರೇಣುಕಾಚಾರ್ಯ ಕಣ್ಣೀರಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next