Advertisement

Karnataka Polls ಶೆಟ್ಟರ್, ಸವದಿ ಹೋದರೂ ಯಾವುದೇ ಸಮಸ್ಯೆಯಿಲ್ಲ: ಯಡಿಯೂರಪ್ಪ

06:26 PM Apr 18, 2023 | keerthan |

ಶಿವಮೊಗ್ಗ: ರಾಜ್ಯದಲ್ಲಿ ವಾತಾವರಣ ಚೆನ್ನಾಗಿದೆ‌. ಜಗದೀಶ್ ಶೆಟ್ಟರ್, ಲಕ್ಷಣ್ ಸವದಿ ಹೋದರೂ ಯಾವುದೇ ಸಮಸ್ಯೆಯಿಲ್ಲ. ಮೊದಲಿನಂತೆಯೇ ರಾಜ್ಯದಲ್ಲಿ 125-130 ಗೆದ್ದು ಬಿಜೆಪಿ ಅಧಿಕಾರಕ್ಕೆ ಬರುತ್ತೇವೆ. ಯಾರ ಸಹಕಾರ ಇಲ್ಲದೇ ಸರ್ಕಾರ ರಚನೆ ಸಹ ಮಾಡುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ನಾಯಕರು ನಿಮ್ಮ ಮನೆಯವರಿಗೆ ಸೀಟ್ ಕೊಡುತ್ತೇವೆ. ನಿಮ್ಮನ್ನು ರಾಜ್ಯಸಭೆಗೆ ಕಳುಹಿಸಿ, ಕೇಂದ್ರ ಮಂತ್ರಿ ಮಾಡುತ್ತೇವೆ ಎಂದಿದ್ದರು. ಕೇಂದ್ರದ ನಾಯಕರು ಮನೆ ಬಾಗಿಲಿಗೆ ಬಂದರೂ ಶೆಟ್ಟರ್ ಹಠ ಬಿಡಲಿಲ್ಲ. ಅವರು ತಗೊಂಡ ತೀರ್ಮಾನ ಸರಿಯಲ್ಲ. ನಿರ್ಧಾರದಿಂದ ಅವರೇ ದುಷ್ಪರಿಣಾಮ ಎದುರಿಸಲಿದ್ದಾರೆ ಎಂದರು.

ಇದನ್ನೂ ಓದಿ:Watch Viral Video: ನವಿಲು ಮೊಟ್ಟೆ ಕದಿಯಲು ಮರವೇರಿದ ಯುವತಿ, ತಕ್ಕ ಪಾಠ ಕಲಿಸಿದ ನವಿಲು!

ಶಿವಮೊಗ್ಗ, ಮಾನ್ವಿ ಎರಡು ಕ್ಷೇತ್ರದ ಅಭ್ಯರ್ಥಿಗಳು ಘೋಷಣೆಯಾಗಿಲ್ಲ. ಇಂದು ಸಂಜೆ ಅಥವಾ ರಾತ್ರಿ ಘೋಷಣೆಯಾಗಲ್ಲ. ತಡವಾಗಲು ಕಾರಣ ಏನು ಎಂಬುದು ಗೊತ್ತಿಲ್ಲ ಎಂದರು.

ನಾಳೆ ವಿಜಯೇಂದ್ರ ನಾಮಪತ್ರ ಸಲ್ಲಿಕೆ ಮಾಡುತ್ತಾನೆ. ಅದಕ್ಕಾಗಿ ಬಂದಿದ್ದೇನೆ. ನಾಳೆ ಮತ್ತೆ ಬೆಂಗಳೂರಿಗೆ ಹೋಗಿ, ಪ್ರವಾಸ ಮುಂದುವರೆಸುತ್ತೇನೆ ಎಂದು ಬಿಎಸ್ವೈ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next