Advertisement

ದಿನನಿತ್ಯ ಪ್ರತಿಭಟನೆ ನಡೆಸುವುದನ್ನು ಕೈಬಿಟ್ಟು ಚರ್ಚೆಗೆ ಬನ್ನಿ: ರೈತ ಮುಖಂಡರಿಗೆ ಸಿಎಂ ಮನವಿ

04:07 PM Dec 09, 2020 | sudhir |

ಬೆಂಗಳೂರು : ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಪದೇ ಪದೇ ಪ್ರತಿಭಟನೆ ನಡೆಸಿ ಜನರಿಗೆ ತೊಂದರೆ ಕೊಡುವ ಬದಲು ಪ್ರತಿಭಟನೆಯನ್ನು ಕೈಬಿಟ್ಟು ನಮ್ಮೊಂದಿಗೆ ಚರ್ಚೆಗೆ ಬನ್ನಿ ಎಂದು ರೈತ ಮುಖಂಡರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.

Advertisement

ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ರೈತ ಮುಖಂಡರು ಪ್ರತಿಭಟನೆಯನ್ನು ಬಿಟ್ಟು ನಮ್ಮೊಂದಿಗೆ ಚರ್ಚೆಗೆ ಬನ್ನಿ ನಿಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಿ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ರೈತರ ಮೇಲೆ ರೈತ ಮುಖಂಡರಿಗಿಂತಲೂ ಹೆಚ್ಚಿನ ಕಾಳಜಿ ಇದೆ, ಹಾಗಾಗಿ ರೈತರ ಒಳಿತಿಗಾಗಿ ಮಾಡಿರುವ ಸುಧಾರಣೆಯನ್ನು ವಿರೋಧಿಸುವ ಬದಲು ನಿಮ್ಮಲಿರುವ ಅನುಮಾನಗಳನ್ನು ಬಗೆಹರಿಸಿಕೊಳ್ಳಿ ದಿನನಿತ್ಯ ಪ್ರತಿಭಟನೆ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.

ಇದನ್ನೂ ಓದಿ:ಪಟ್ಟು ಬಿಡದಿದ್ರೆ ನಾವೂ ಬಗ್ಗಲ್ಲ:ಕೇಂದ್ರದ ಕರಡು ಪ್ರಸ್ತಾವನೆ ಬಗ್ಗೆ ರೈತರ ಚರ್ಚೆ…ಮುಂದೇನು

ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೃಷಿ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ, ಸರಕಾರ ರೈತರ ಪರವಾಗಿದೆ, ಏನೇ ಅನುಮಾನಗಳಿದ್ದರೂ ಚರ್ಚಿಸೋಣ ಎಂದು ರೈತ ಮುಖಂಡರಲ್ಲಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next