Advertisement

ಯಡಿಯೂರಪ್ಪ ಎಂದಾದರೂ ಮುಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆಯೇ?

09:56 AM Dec 03, 2019 | Sriram |

ಚಿಕ್ಕಬಳ್ಳಾಪುರ: ಬಿ.ಎಸ್.ಯಡಿಯೂರಪ್ಪ ಎಂದಾದರೂ ರಾಜ್ಯದಲ್ಲಿ ಮುಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆಯೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಂಚನಬಲೆಯಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ನಂದಿ ಅಂಜನಪ್ಪ ಪರ ಮತಯಾಚನೆ ಮಾಡಿ ಮಾತನಾಡಿದರು.

ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದು ಹಿಂಬಾಲಿಗಿಲಿನಿಂದ ಎಂದು ಸಿದ್ದರಾಮಯ್ಯ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಸಿಎಂ ಆಗಲಿಕ್ಕೆ ತಿರುಕನ ಕನಸು ಕಾಣುತ್ತಿದ್ದಾರೆಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಐದು ವರ್ಷ ಮುಖ್ಯಮಂತ್ರಿ ಆಗಿದ್ದೆ. ಯಡಿಯೂರಪ್ಪ ಎಂದಾದರೂ ಐದು ವರ್ಷ ಅಧಿಕಾರ ನಡೆಸಿದ್ದರಾ ಎಂದು ಕಿಡಿಕಾರಿದರು. ಶಾಸಕರಿಗೆ 3೦-4೦ ಕೋಟಿ ಕೊಟ್ಟು ಖರೀದಿ ಮಾಡಿ ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದಾರೆ. ನನ್ನ ಬಗ್ಗೆ ಮಾತನಾಡುವ ನೈತಿಕತೆ ಯಡಿಯೂರಪ್ಪಗೆ ಇಲ್ಲ ಎಂದರು.

ನಾನು ಮುಖ್ಯಮಂತ್ರಿ ಆಗಿದ್ದಾಗ 122 ಶಾಸಕರು ಗೆದ್ದಿದ್ದವು. ಯಡಿಯೂರಪ್ಪಗೆ ಅಧಿಕಾರ ನಡೆಸಲು ಬಹುಮತವೇ ಇಲ್ಲ. ನಾನು ಎಂದೂ ಕೂಡ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿಲ್ಲ ಎಂದರು.

Advertisement

ಹೆಚ್.ಡಿ.ಕುಮಾರಸ್ವಾಮಿ. ಡಿ.ಕೆ.ಶಿವಕುಮಾರ್ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಭೇಟಿ ಮಾಡಬೇಡಿ ಅಂತ ಹೇಳಿಕ್ಕೆ ಅಗುತ್ತಾ ಎಂದು ಪ್ರಶ್ನಿಸಿದರು, ಉಪ ಚುನಾವಣೆ ಬಳಿಕ ಹೊಸ ಸರ್ಕಾರ ರಚನೆ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಚುನಾವಣೆ ಫಲಿತಾಂಶ ಬರಲಿ ಅವೆಲ್ಲಾ ಮತ್ತೆ ಮಾತನಾಡೋಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next