Advertisement

ಯಡಿಯೂರಪ್ಪ ಟಿಕೆಟ್‌ ಮಾರಿದ್ದಾರೆ: ಮಾಜಿ ಸಚಿವ ಬೆಳಮಗಿ ಬಂಡಾಯ 

10:28 AM Apr 21, 2018 | Team Udayavani |

 ಕಲಬುರಗಿ: ಗ್ರಾಮೀಣ ಮೀಸಲು ಕ್ಷೇತ್ರಕ್ಕೆ ಜಿಲ್ಲಾ ಪಂಚಾಯತ್‌ ಸದಸ್ಯ ಬಸವರಾಜ ಮತ್ತಿಮೂಡ ಅವರಿಗೆ ಬಿಜೆಪಿ ಟಿಕೆಟ್‌ ನೀಡಲಾಗಿರುವ ಹಿನ್ನಲೆಯಲ್ಲಿ  ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ರೇವು ನಾಯಕ್‌ ಬೆಳಮಗಿ ಅವರು ಬಂಡಾಯವೆದ್ದಿದ್ದಾರೆ. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಬೆಳಮಗಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ಕಿಡಿ ಕಾರಿದರು. 

ನಾನು ಕೆಜೆಪಿಗೆ ಹೋಗಲಿಲ್ಲ, ಹೀಗಾಗಿ  ಯಡಿಯೂರಪ್ಪ ನನಗೆ ಟಿಕೆಟ್‌ ತಪ್ಪಿಸಿದ್ದಾರೆ. ಅವರು ಟಿಕೆಟನ್ನು ಮಾರಾಟ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ. 

ಬೆಂಬಲಿಗರ ಸಭೆ ನಡೆಸಿ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ  ಬೆಳಮಗಿ ತಿಳಿಸಿದ್ದಾರೆ. 

 ಈ ಕ್ಷೇತ್ರದಲ್ಲಿ ಬಾಬುರಾವ ಚವ್ಹಾಣ ಸೇರಿದಂತೆ ಇತರರು ತೀವ್ರ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು.ಬೆಳಮಗಿ ಅವರಿಗೆ ಮತ್ತೂಮ್ಮೆ ಮಣೆ ಹಾಕಲಾಗುತ್ತದೆ ಎಂದು ಬಲವಾಗಿ ನಂಬಲಾಗಿತ್ತು. ಆದರೆ ಬಸವರಾಜ ಮತ್ತಿಮೂಡ ಅವರಿಗೆ ಟಿಕೆಟ್‌ ಘೋಷಿಸಲಾಗಿದೆ.

Advertisement

ಬೆಳಮಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಮೀಸಲು ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಎದುರು ಪರಾಭವಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next