Advertisement

ಭೀಕರ ಕಾರು ಅಪಘಾತ:ನ್ಯೂಇಯರ್‌ ಸಂಭ್ರಮದಲ್ಲಿದ್ದ ಮೂವರ ದುರ್ಮರಣ

04:44 AM Jan 02, 2019 | |

ಬೆಂಗಳೂರು: ಹೊಸಕೋಟೆಯ ಮೈಲಾಪುರ ಗೇಟ್‌ ಬಳಿ ಬುಧವಾರ ನಸುಕಿನ ವೇಳೆ ಟಾಟಾ  ಸಫಾರಿ ಕಾರೊಂದು ಡಿವೈಡರ್‌ಗೆ ಢಿಕ್ಕಿಯಾಗಿ ಭೀಕರ ಅವಘಡ ಸಂಭವಿಸಿದ್ದು ಮೂವರು ದಾರುಣವಾಗಿ ಸಾವನ್ನಪ್ಪಿ , ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಅಪಘಾತದ ತೀವ್ರತೆಗೆ ಕಾರು ಅಡಿಮೇಲಾಗಿ ಬಿದ್ದಿದ್ದು ಸ್ಥಳದಲ್ಲೇ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. 

ಮೃತ ದುರ್‌ದೈವಿಗಳು ಆಂಧ್ರದ ಪಶ್ಚಿಮ ಗೋದಾವರಿ ಮೂಲದ ಶ್ರೀನಾಥ್‌ (40), ಶ್ರೀಲೇಖಾ(36)ಮತ್ತು ಶ್ರೀಲತಾ (32)ಎನ್ನುವರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಹೊಸ ವರ್ಷದ ಸಂಭ್ರಮಾಚರಣೆ ನಡೆಸಿ ತವರಿನಿಂನ ವೈಟ್‌ ಫೀಲ್ಡ್‌ಗೆ ಆಗಮಿಸುವ ವೇಳೆ  ದುರಂತ ಸಂಭವಿಸಿದೆ. 

ಹಸಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Advertisement
Advertisement

Udayavani is now on Telegram. Click here to join our channel and stay updated with the latest news.

Next