Advertisement

Kalaburagi; ಒಂದೇ ದಿನ ಹೃದಯಾಘಾತದಿಂದ ಕೊನೆಯುಸಿರೆಳೆದ ಅಣ್ಣ-ತಮ್ಮ!

09:38 PM Apr 15, 2023 | Team Udayavani |

ವಾಡಿ: ಒಂದೇ ದಿನ ಒಂದೇ ಮನೆಯಲ್ಲಿ ಇಬ್ಬರು ಸಹೋದರರು ಹೃದಯಾಘಾತಕ್ಕೀಡಾಗಿ ಮೃತಪಟ್ಟ ಸೇರಿದ ಘಟನೆ ಶುಕ್ರವಾರ ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮದಲ್ಲಿ ಸಂಭವಿಸಿದೆ.

Advertisement

ಹಂಪಣ್ಣ ಸಿದ್ದಣ್ಣ ಪೂಜಾರಿ (60) ಹಾಗೂ ನಾಗಪ್ಪ ಸೋಮಲಿಂಗಪ್ಪ ಪೂಜಾರಿ (62) ಮೃತರು. ವೃತ್ತಿಯಲ್ಲಿ ರೈತರಾಗಿದ್ದ ಈ ಇಬ್ಬರೂ ಸಹೋದರರು ಒಂದೇ ಗಳಿಗೆಯಲ್ಲಿ ಸಾವಿಗೀಡಾಗಿದ್ದು, ಕುಟುಂಬ ವರ್ಗದಲ್ಲಿ ದು:ಖ ಮಡುಗಟ್ಟಿದೆ.

ನಾಗಪ್ಪ ಎಂಬುವವರಿಗೆ ಶುಕ್ರವಾರ ರಾತ್ರಿ 11:30ಕ್ಕೆ ಎದೆ ನೋವು ಕಾಣಿಸಿಕೊಂಡಿದೆ. ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಕೊನೆ ಉಸಿರೆಳೆದಿದ್ದಾರೆ. ಹಿರಿಯ ಸಹೋದರ ನಾಗಪ್ಪನನ್ನು ಆಸ್ಪತ್ರೆಗೆ ಸಾಗಿಸಿ ಮನೆಗೆ ಬಂದಿದ್ದ ಹಂಪಣ್ಣ ಕೂಡ ಹಠಾತ್ ಎದೆ ನೋವಿನಿಂದ ಬಳಲಿದ್ದಾರೆ. ಹಿರಿಯ ಅಣ್ಣನ ಶವ ಮನೆಯಲ್ಲಿರುವಾಗಲೇ ತಮ್ಮನೂ ಮೃತಪಟ್ಟಿದ್ದ ಗಳಿಗೆ ಗ್ರಾಮಸ್ಥರಲ್ಲಿ ಆಶ್ಚರ್ಯ ಮೂಡಿಸಿದೆ.

ಶನಿವಾರ ಮಧ್ಯಾಹ್ನ ಇಬ್ಬರು ಸಹೋದರರ ಅಂತ್ಯಸಂಸ್ಕಾರವನ್ನು ಗ್ರಾಮದ ಸ್ವಂತ ಜಮೀನಿನಲ್ಲಿ ನೆರವೇರಿಸಲಾಯಿತು ಎಂದು ಕುಟುಂಬ ಮೂಲಗಳು ತಿಳಿಸುವೆ. ಕೊಲ್ಲೂರು ಗ್ರಾಮದಲ್ಲಿ ಜೋಡು ಶವ ಸಂಸ್ಕಾರ ನಡೆದಿದ್ದು ಕುಟುಂಬ ವರ್ಗದವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next