Advertisement

ಹಂಪಿಗೆ ಬ್ರಿಗೇಡಿಯರ್‌ ಚೌಧರಿ ಭೇಟಿ

05:31 PM Apr 01, 2022 | Team Udayavani |

ಹೊಸಪೇಟೆ: ಭಾರತೀಯ ಸೇನಾ ಪಟೆ ಬ್ರಿಗೇಡಿಯರ್‌ ನವೀನ್‌ ಎನ್‌. ರೋಹಿತ್‌ ಚೌಧರಿ ದಂಪತಿ ಗುರುವಾರ ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಿ ಪ್ರಸಿದ್ಧ ಸ್ಮಾರಕಗಳನ್ನು ವೀಕ್ಷಿಸಿದರು.

Advertisement

ಐತಿಹಾಸಿಕ ವಿರೂಪಾಕ್ಷೇಶ್ವರ ದೇಗುಲಕ್ಕೆ ಭೇಟಿ ನೀಡಿದ ಅವರು, ವಿರೂಪಾಕ್ಷ, ಪಂಪಾದೇವಿ ಹಾಗೂ ಭುವನೇಶ್ವರಿ ದೇವಿ ದರ್ಶನ ಪಡೆದರು. ಬಳಿಕ ಹೇಮಕೂಟ, ಸಾಸಿವೆಕಾಳು ಗಣೇಶ, ಉಗ್ರ ನರಸಿಂಹ, ಬಡವಿಲಿಂಗ, ಕಮಲ್‌ ಮಹಲ್‌, ಗಜಶಾಲೆ, ರಾಜ ಪ್ರಾಂಗಣ, ರಾಣಿಸ್ನಾನ ಗೃಹ, ಮಹಾನವಮಿ ದಿಬ್ಬ, ಹಜಾರರಾಮ ದೇವಾಲಯ, ವಿಜಯ ವಿಠಲ ದೇವಸ್ಥಾನ ವೀಕ್ಷಿಸಿದರು. ಶಿಲ್ಪಕಲಾ ವೈಭವದ ಬೆರಗನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದರು.

ಈ ವೇಳೆ ಪ್ರತಿಕ್ರಿಯಿಸಿದ ಬ್ರಿಗೇಡಿಯರ್‌ ರೋಹಿತ್‌ ಚೌದರಿ, ಭಾರತ ಮತ್ತು ಜಪಾನ್‌ ಜಂಟಿ ಸಮರಾಭ್ಯಾಸ ಮುಗಿದ ನಂತರ ಹಂಪಿ ವೀಕ್ಷಿಸಬೇಕೆಂದಿದ್ದೆ. ಅದರಂತೆ ಇದೀಗ ಹಂಪಿಗೆ ಆಗಮಿಸಿ ಪುರಾತನ ಶ್ರೀಮಂತ ಶಿಲ್ಪ ಕೆತ್ತನೆ ನೋಡಿದ್ದೇನೆ. ವಿಜಯನಗರ ಸಾಮ್ರಾಜ್ಯದ ರಾಜ್ಯಧಾನಿ ಹಂಪಿ ಕುರಿತು ಕೇಳಿ ತಿಳಿದುಕೊಂಡಿದ್ದೆ. ಇದೀಗ ಕಣ್ಣಾರೆ ಕಂಡು ಸಂತೋಷವಾಯಿತು ಎಂದರು.

ಬ್ರಿಗೇಡಿಯರ್‌ ರೋಹಿತ್‌ ಚೌಧರಿ ಅವರಿಗೆ ವಿರೂಪಾಕ್ಷಿ ಅವರು ಗೈಡ್‌ ಮಾಡುವ ಮೂಲಕ ಹಂಪಿಯ ಶ್ರೀಮಂತರ ಪರಂಪರೆ, ಸಂಸ್ಕೃತಿ ಹಾಗೂ ಕಲಾವೈಭವವನ್ನು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next