Advertisement

ಸೇತುವೆ, ರಸ್ತೆ ಕಾಮಗಾರಿಗೆ ಚಾಲನೆ

12:06 PM Aug 05, 2020 | Suhan S |

ಕುಣಿಗಲ್‌: ಆರು ನೂರ ಹದಿನಾಲ್ಕು ಕೋಟಿ ರೂ. ವೆಚ್ಚದ ಹೇಮಾವತಿ ಲಿಂಕ್‌ ಕೆನಾಲ್‌ ಯೋಜನೆಯನ್ನು ರಾಜಕಾರಣಿ ಗಳು ಬೇರೆ ರೀತಿಯ ಬಣ್ಣ ಕಟ್ಟಿ ಜನರನ್ನು ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಡಾ.ಎಚ್‌.ಡಿ. ರಂಗನಾಥ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

ತಾಲೂಕಿನ ಉಜ್ಜಿನಿ ಮತ್ತು ದೇವ ಸಂದ್ರ ಗ್ರಾಮದಲ್ಲಿ ರಸ್ತೆ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಕಳೆದ 20 ವರ್ಷ ಗಳಿಂದ ತಾಲೂಕಿಗೆ ನ್ಯಾಯ ಸಮ್ಮತವಾಗಿ ಹರಿಯಬೇಕಾದ ಹೇಮಾವತಿ ನೀರು ಹರಿಸಿ, ರೈತರಿಗೆ ಹಾಗೂ ನಾಗರಿಕರ ಕುಡಿವ ನೀರಿಗೆ ಅನುಕೂಲ ಮಾಡಿಕೊಡುವಲ್ಲಿ ಅಂದಿನ ವಿಪಕ್ಷ ನಾಯಕರå ಹಾಗೂ ಅಧಿಕಾರಿಗಳು ವಿಫಲಗೊಂಡಿದ್ದಾರೆ ಎಂದು ಆರೋಪಿಸಿದರು.

ಅಂದಿನ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ಸಂಸದ ಡಿ.ಕೆ. ಸುರೇಶ್‌ ಸಮಿಶ್ರ ಸರ್ಕಾರದಲ್ಲಿ ಲಿಂಕ್‌ ಕೆನಾಲ್‌ ಯೋಜನೆಯ ಕಾಮಗಾರಿಗೆ 614 ಕೋಟಿ ವೆಚ್ಚದ ಕ್ರಿಯಾ ಯೋಜನೆ ರೂಪಿಸಿ, ಮಂಜೂರಾತಿ ಪಡೆದು ಟೆಂಡರ್‌ ಪ್ರಕ್ರಿಯೆ ನಡೆಯಿತು. ಆದರೆ, ಸರ್ಕಾರದ ಬದಲಾವಣೆಯಿಂದ ಕಾಮಗಾರಿ ತಡೆ ಹಿಡಿಯಲಾಗಿದೆ ಮತ್ತೆ ಲಿಂಕ್‌ ಕೆನಲಾ ಯೋಜನೆಯನ್ನು ತಂದು ತಾಲೂಕಿಗೆ ನೀರು ಹರಿಸಿದ್ದಾಗ ಮಾತ್ರ ನನ್ನ ಜೀವನ ಪಾವನವಾಗುತ್ತದೆ ಎಂದರು.

ಹುಲಿಯೂರುದುರ್ಗ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೆಂಟಕರಾಮು, ತಾಪಂ ಮಾಜಿ ಅಧ್ಯಕ್ಷ ಎಸ್‌.ಆರ್‌.ಚಿಕಣ್ಣ, ಗುತ್ತಿಗೆದಾರರಾದ ಮನವಳಯ್ಯ, ಶಿವಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next