Advertisement

Heavy Rain ಭರಣಿಕೊಳ್ಳಿ ಸೇತುವೆಯ ಸಂಪರ್ಕ ಕಡಿತ

11:34 PM Jul 16, 2024 | Team Udayavani |

ಸಿದ್ದಾಪುರ: ಭಾರೀ ಮಳೆಯ ಅಬ್ಬರಕ್ಕೆ ಹಾಲಾಡಿ-ತಟ್ಟುವಟ್ಟು ಸಂಪರ್ಕಿಸುವ ಭರಣಿಕೊಳ್ಳಿ ಸೇತುವೆಯ ಸಂಪರ್ಕ ಕಡಿದು ಹೋಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Advertisement

ಹಾಲಾಡಿ ಗ್ರಾಮದ ಸೊಸೈಟಿಯ ಬಳಿಯಿಂದ ಹಾರ್ರಮಕ್ಕಿ ಮಾರ್ಗದ ಭರಣಿಕೊಳ್ಳಿ ಬಳಿ ಸಣ್ಣ ಹೊಳೆಗೆ ಕಳೆದ ವರ್ಷ ಸೇತುವೆ ನಿರ್ಮಿಸಲಾಗಿತ್ತು.

ನೀರಿನ ರಭಸಕ್ಕೆ ಸೇತುವೆಯ ಬಳಿ ಮಣ್ಣು ಕುಸಿದು ನೀರು ಪಾಲಾಗಿದೆ. ಪರಿಣಾಮ ಎರಡು ಭಾಗದ ಸಂಪರ್ಕ ಕಡಿತಗೊಂಡಿದೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ, ಜಿ.ಪಂ. ಸಿಇಒ ಪ್ರತೀಕ್‌ ಬಾಯಲ್‌, ಸಹಾಯ ಆಯುಕ್ತೆ ರಶ್ಮಿ ಎಸ್‌.ಆರ್‌., ಕುಂದಾಪುರ ತಹಶೀಲ್ದಾರ್‌ ಶೋಭಾಲಕ್ಷ್ಮೀ ಮೊದಲಾದವರು ಭೇಟಿ ನೀಡಿ, ಪರಿಶೀಲನೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next