Advertisement

ಲಂಚ ಸ್ವೀಕರಿಸುವಾಗ ಬೆಸ್ಕಾಂ ಎಂಜಿನಿಯರ್‌ ವಿದ್ಯಾ ಬಂಧನ

02:14 PM Mar 02, 2023 | Team Udayavani |

ಬೆಂಗಳೂರು: ಮನೆಯ ಆವರಣದಲ್ಲಿದ್ದ ವಿದ್ಯುತ್‌ ಕಂಬ ತೆರವುಗೊಳಿಸಲು 25 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಬೆಸ್ಕಾಂ ಸಹಾಯಕ ಎಂಜಿನಿಯರ್‌ ಲೋಕಾ ಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಬೆನ್ನಿಗಾನಹಳ್ಳಿ ಕಸ್ತೂರಿನಗರ ಬೆಸ್ಕಾಂ ಸಬ್‌ ಡಿವಿಷನ್‌ ಕಚೇರಿಯ ಸಹಾಯಕ ಎಂಜಿನಿಯರ್‌ ವಿದ್ಯಾ ಬಂಧಿತ ಆರೋಪಿ.

ಕಸ್ತೂರಿನಗರ ಬೆಸ್ಕಾಂ ಕಚೇರಿ ವ್ಯಾಪ್ತಿಯಲ್ಲಿ ಮನೆಯೊಂದರ ಆವರಣ ದಲ್ಲಿದ್ದ ವಿದ್ಯುತ್‌ ಕಂಬ ಸ್ಥಳಾಂತರ ಕಾಮಗಾರಿ ನಡೆಸಲಾಗುತ್ತಿತ್ತು. ಈ ಕುರಿತು ಎಲೆಕ್ಟ್ರಿಕ್‌ ಗುತ್ತಿಗೆದಾರ ನಾರಾಯಣಪುರ ನಿವಾಸಿ ಅರ ವಿಂದ್‌ಗೆ ಕಾರ್ಯಾದೇಶ ನೀಡ ಬೇಕಿತ್ತು. ಇದಕ್ಕೆ ಸಂಬಂಧಿಸಿದಂತೆ ಬೆಸ್ಕಾಂನ ಸಹಾಯಕ ಎಂಜಿನಿಯರ್‌ ವಿದ್ಯಾ ಅವರನ್ನು ಸಂಪರ್ಕಿಸಿ ಈ ಬಗ್ಗೆ ವಿಚಾರಿಸಿದ್ದರು. ಕಾರ್ಯಾದೇಶ ನೀಡಲು 25 ಸಾವಿರ ರೂ. ಲಂಚಕ್ಕೆ ವಿದ್ಯಾ ಬೇಡಿಕೆಯಿಟ್ಟಿದ್ದರು. ಅರವಿಂದ್‌ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದರು.

ಬುಧವಾರ ಅರವಿಂದ್‌ ಅವರಿಂದ ವಿದ್ಯಾ ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ವಿದ್ಯಾ ಅವರನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next