Advertisement

Mamata Banerjee ದೂಷಿಸಿದವರ ಬೆರಳು ಮುರಿಯಿರಿ: ಟಿಎಂಸಿ ಸಚಿವ ವಿವಾದ

06:51 PM Aug 19, 2024 | Team Udayavani |

 ಕೋಲ್ಕತಾ: ಟ್ರೈನಿ ವೈದ್ಯೆಯ ಮೇಲಿನ ಅ*ತ್ಯಾಚಾರ ಮತ್ತು ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ದೂಷಿಸುತ್ತಿರುವವರು ಮತ್ತು ರಾಜೀನಾಮೆಗೆ ಒತ್ತಾಯಿಸುವವರ ಬೆರಳುಗಳನ್ನು ಮುರಿಯಲಾಗುವುದು ಎಂದು ಟಿಎಂಸಿಯ ಹಿರಿಯ ಸಚಿವ ಉದಯನ್ ಗುಹಾ ಅವರು ಪ್ರಚೋದನಕಾರಿ ಹೇಳಿಕೆ ನೀಡಿ ವಿವಾದವನ್ನು ಹುಟ್ಟುಹಾಕಿದ್ದಾರೆ.

Advertisement

“ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ ನಡೆಸುತ್ತಿರುವವರು, ಅವರತ್ತ ಬೆರಳು ತೋರಿಸುವವರು ಮತ್ತು ಅವರ ರಾಜೀನಾಮೆಗೆ ಒತ್ತಾಯಿಸುವವರು ಎಂದಿಗೂ ಯಶಸ್ವಿಯಾಗುವುದಿಲ್ಲ. ಮಮತಾ ಬ್ಯಾನರ್ಜಿಯತ್ತ ಬೆರಳು ತೋರುವವರ ಬೆರಳು ಒಡೆದು ಪುಡಿ ಮಾಡಲಾಗುವುದು,” ಎಂದು ಹೇಳಿರುವುದು ವಿಡಿಯೋದಲ್ಲಿ ಕೇಳಿಬಂದಿದೆ. ವೈದ್ಯೆಯ ಪ್ರಕರಣಕ್ಕೆ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿರುವ ವೇಳೆಯಲ್ಲೇ ನೀಡಿದ ಹೇಳಿಕೆ ತೀವ್ರ ವಿವಾದ ಹುಟ್ಟು ಹಾಕಿದೆ.

ವಿಡಿಯೋ ವೈರಲ್ ಆಗಿದ್ದು ಕ್ಲಿಪ್‌ನ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ ಎಂದು ಪಿಟಿಐ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next