Advertisement
“ಪದೇಪದೆ ಚುನಾವಣೆ ನಡೆದರೆ ಅಭಿವೃದ್ಧಿ ಯೋಜನೆಗಳು ಕುಂಠಿತಗೊಳ್ಳುತ್ತವೆ. ಸಾರ್ವಜನಿಕರ ಸಹಜ ಜೀವನಕ್ಕೆ ಭಂಗವೂ ಆಗುತ್ತದೆ. ಚುನಾವಣಾ ಕರ್ತವ್ಯ ಕಾರಣ ಮಾನವ ಸಂಪನ್ಮೂಲದ ಮೇಲೆಯೂ ಅನಗತ್ಯ ಭಾರ ಬೀಳುತ್ತದೆ. ಏಕಕಾಲದ ಚುನಾವಣೆ ರೀತಿ ಪಕ್ಷಗಳ ದುಂದುವೆಚ್ಚದ ಕುರಿತೂ ಚರ್ಚಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.
Related Articles
Advertisement
ಅಲ್ಲದೆ, ನರೇಂದ್ರ ಮೋದಿ ಸರ್ಕಾರ ಫೆಬ್ರವರಿ 1ರಂದು ಮಂಡಿಸುತ್ತಿರುವ ಬಜೆಟ್ ಅನ್ನು ಐತಿಹಾಸಿಕ ಬಜೆಟ್ಗೆ ಪ್ರಣಬ್ ಹೋಲಿಸಿದ್ದಾರೆ. “ಫೆಬ್ರವರಿ 1ರಂದೇ ಬಜೆಟ್ ಆಗುತ್ತಿರುವುದು ಭಾರತದಲ್ಲಿ ಇದೇ ಮೊದಲು. ಈ ಸಂಭ್ರಮಕ್ಕೆ ಸಾಕ್ಷಿ ಆಗುತ್ತಿರುವುದಕ್ಕೆ ನಿಜಕ್ಕೂ ಖುಷಿ ಆಗುತ್ತಿದೆ’ ಎಂದರು. ರಾಷ್ಟ್ರಪತಿ ಪ್ರಣಬ್ಗ ಇದೇ ಕೊನೆಯ ಅಧಿವೇಶನವಾಗಿದೆ.
ಮಾಜಿ ಸಚಿವ ಅಹ್ಮದ್ಗೆ ಹೃದಯಾಘಾತಬಜೆಟ್ ಅಧಿವೇಶನದ ರಾಷ್ಟ್ರಪತಿ ಭಾಷಣದ ವೇಳೆ ಮಾಜಿ ಸಚಿವ ಇ. ಅಹ್ಮದ್ ಹೃದಯಾಘಾತದಿಂದ ಕುಸಿದು ಬಿದ್ದ ಘಟನೆ ನಡೆಯಿತು. ಕೇರಳ ಮಲಪ್ಪುರಂನ ಸಂಸದರಾದ ಅವರನ್ನು ಆರ್ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೃತಕ ಜೀವರಕ್ಷಕವನ್ನು ಅಳವಡಿಸಲಾಗಿದೆ. “ಆಸ್ಪತ್ರೆಗೆ ಸಂಸದರು ದಾಖಲಾಗುವಾಗ ನಾಡಿಮಿಡಿತ ನಿಂತಿತ್ತು. ವೈದ್ಯರ ತಂಡ ಕೂಡಲೇ ಪರೀಕ್ಷಿಸಿ, ಹೃದಯ ಪುನಃ ಬಡಿದುಕೊಳ್ಳುವಂತೆ ಮಾಡಿದರು. ಈಗ ಅವರನ್ನು ತೀವ್ರ ನಿಘಾಘಟಕದಲ್ಲಿಡಲಾಗಿದೆ’ ಎಂದು ಹಿರಿಯ ವೈದ್ಯರು ಹೇಳಿದ್ದಾರೆ. ಅಹಮದ್ ಈ ಹಿಂದೆ ಯುಪಿಎ ಸರ್ಕಾರದಲ್ಲಿ ವಿದೇಶಾಂಗ ಖಾತೆ ಸಹಾಯಕ ಸಚಿವರಾಗಿದ್ದರು. ದೇಶದಲ್ಲಿ ಇಂದು ಉದ್ಯೋಗ ಸೃಷ್ಟಿಯೇ ದೊಡ್ಡ ಪ್ರಶ್ನೆಯಾಗಿದೆ. ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಉದ್ಯೋಗ ಸೃಷ್ಟಿಯತ್ತ ಗಮನವನ್ನೇ ಹರಿಸುತ್ತಿಲ್ಲ.
ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ ಕಾಂಗ್ರೆಸ್ ಉಪಾಧ್ಯಕ್ಷರ ಹೇಳಿಕೆ ಸರಿಯಾಗಿಲ್ಲ. ಅವರದ್ದು ಉತ್ಪ್ರೇಕ್ಷೆಯ ಹೇಳಿಕೆಯಾಗಿದೆ.
ಆರ್.ಪಿ.ರೂಡಿ, ಕೇಂದ್ರ ಸಚಿವ.