Advertisement

ಬ್ರಹ್ಮಾವರ: ಕುಖ್ಯಾತ ಕಳ್ಳನ ಬಂಧನ; 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಸೊತ್ತು ವಶ

06:52 PM Dec 20, 2022 | Team Udayavani |

ಬ್ರಹ್ಮಾವರ: ರಾತ್ರಿ ಸಮಯ ಮನೆ ಕನ್ನ, ಕಳವು ನಡೆಸುತ್ತಿದ್ದ ಕುಖ್ಯಾತ ಆರೋಪಿ ಕಾಡೂರು ತಂತ್ರಾಡಿಯ ವಿಜಯ ಕುಮಾರ್‌ ಶೆಟ್ಟಿಯನ್ನು ಬಂಧಿಸಲಾಗಿದೆ.

Advertisement

ಮನೆ ಕಳ್ಳತನ ಪ್ರಕರಣದ ಆರೋಪಿಗಳು ಹಾಗೂ ಜೈಲಿನಿಂದ ಬಿಡುಗಡೆಯಾದವರ ಮಾಹಿತಿಯನ್ನು ಕಲೆಹಾಕಿ ಅವರ ಚಲನವಲನದ ಮೇಲೆ ನಿಗಾ ವಹಿಸಲಾಗಿತ್ತು. ಅದರಂತೆ ಸೋಮವಾರ ಸಂಜೆ ನೀಲಾವರ ಕ್ರಾಸ್‌ ಬಳಿ ಕಳ್ಳತನ ಪ್ರಕರಣದ ಹಳೆಯ ಆರೋಪಿ ವಿಜಯ ಕುಮಾರ್‌ ಶೆಟ್ಟಿಯನ್ನು ತಡೆದು ನಿಲ್ಲಿಸಿ ಆತನ ದ್ವಿಚಕ್ರ ವಾಹನ ಪರಿಶೀಲಿಸಿದಾಗ ಕಳ್ಳತನ ನಡೆಸಲು ಬೇಕಾದ ಸಲಕರಣೆಗಳು ಪತ್ತೆಯಾಗಿವೆ.

ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಈತನು ಬ್ರಹ್ಮಾವರ ಮತ್ತು ಕೋಟ ಠಾಣಾ ವ್ಯಾಪ್ತಿಯ ಹಲವು ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿರುತ್ತದೆ.

ಪ್ರಕರಣಗಳು:
2022ರ ಮಾರ್ಚ್‌ ಎಪ್ರಿಲ್‌ ತಿಂಗಳ ಮಧ್ಯಾವ ಧಿಯಲ್ಲಿ ಕಾಡೂರು ಗ್ರಾಮದ ತಂತ್ರಾಡಿ ಸದಾಶಿವ ಮಹಾಬಲೇಶ್ವರ ರಾವ್‌ ಅವರ ಹಳೆ ಮನೆಯ ಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿ ಸುಮಾರು 280ಕೆ.ಜಿ. ತೂಕದ ರೂ.1,40,000 ಮೌಲ್ಯದ ಏಳು ಮೂಟೆ ಕಾಳು ಮೆಣಸುಗಳನ್ನು ಕಳವು ಮಾಡಿರುತ್ತಾನೆ. ಜುಲಾೖಯಲ್ಲಿ ನಡೂರು ಪ್ರಾ. ಶಾಲೆಯ ಬೀಗ ಮುರಿದು ಒಂದು ಗ್ಯಾಸ್‌ ಸಿಲಿಂಡರ್‌ ಕಳವು, ಯಡ್ತಾಡಿ ಗ್ರಾಮದ ದಾಲಾಡಿಯಲ್ಲಿರುವ ವಾಣಿ ಭಂಡಾರಿ ಅವರ ಮನೆಯಲ್ಲಿ ಸುಮಾರು 5,04,000 ರೂ. ಮೌಲ್ಯದ ಚಿನ್ನಾಭರಣ ಹಾಗೂ ರೂ.15,000 ನಗದು ಕಳವು, ನವಂಬರ್‌ನಲ್ಲಿ ಬಿಲ್ಲಾಡಿ ಮಾನ್ಯ ಶಾಲೆಯ ಎದುರು ಸುಜಾತ ಶೆಟ್ಟಿ ಅವರ ಮನೆ ಕಳ್ಳತನ, ಆರೂರು ಗ್ರಾಮದ ಮೇಲಡು³ ಭಾಸ್ಕರ ಶೆಟ್ಟಿ ಅವರ ಮನೆಯಲ್ಲಿ ರೂ.31,000 ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ, ಸೀರೆ ಹಾಗೂ ನಗದು ರೂ. 5,000 ಕಳವು ಮಾಡಿದ್ದನು.

ಈಗಾಗಲೇ ತುಂಗಾನಗರ, ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ತಲಾ 2 ಪ್ರಕರಣ, ಮಂಗಳೂರು ಬಂದರು 4, ಎನ್‌.ಆರ್‌.ಪುರ, ಹರಿಹರ, ಆಗುಂಬೆ, ಬ್ರಹ್ಮಾವರ ಠಾಣೆಯಲ್ಲಿ ತಲಾ 1 ಪ್ರಕರಣ ದಾಖಲಾಗಿರುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಯು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು ಜಾಮೀನು ರಹಿತ ವಾರಂಟ್‌ ಜಾರಿಯಾಗಿರುತ್ತದೆ.

Advertisement

ಸ್ವಾಧೀನಪಡಿಸಿದ ಸೊತ್ತುಗಳ ವಿವರ:
ಕೃತ್ಯಕ್ಕೆ ಬಳಸುತ್ತಿದ್ದ ಸ್ಕೂಟರ್‌ ಮೌಲ್ಯ ರೂ. 30,000, ಕಳವು ಮಾಡಿದ ರೂ. 4,64,700 ಮೌಲ್ಯದ ಚಿನ್ನಾಭರಣ, ರೂ. 2,080 ಮೌಲ್ಯದ ಬೆಳ್ಳಿ ನಾಣ್ಯ,ರೂ. 9,000 ಮೌಲ್ಯದ ಸೀರೆ, ಕಾಳುಮಣಸಿನ ಮಾರಾಟದಿಂದ ಪಡೆದ ನಗದು ರೂ. 84,000 ಹಾಗೂ ಗ್ಯಾಸ್‌ ಸಿಲಿಂಡರ್‌ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಎಸ್‌ಪಿ ಅಕ್ಷಯ ಎಂ.ಎಚ್‌., ಎಎಸ್‌ಪಿ ಎಸ್‌.ಟಿ. ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಂತೆ, ಉಪಾಧೀಕ್ಷಕ ಸುಧಾಕರ ಎಸ್‌. ನಾಯ್ಕ ಅವರ ನಿರ್ದೇಶನದಂತೆ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಉಪನಿರೀಕ್ಷಕರಾದ ರಾಜಶೇಖರ ವಂದಲಿ, ಮುಕ್ತಾಬಾಯಿ, ಮಧುಬಿ.ಇ. ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next