Advertisement

ಬ್ರಹ್ಮಾವರ: ಒಳಾಂಗಣ ಕ್ರೀಡಾಂಗಣ ಉದ್ಘಾಟನೆ

12:40 AM May 09, 2019 | Sriram |

ಬ್ರಹ್ಮಾವರ: ಉತ್ತಮ ತರಬೇತಿಯಿಂದ ಕ್ರೀಡಾ ಪ್ರತಿಭೆಗಳು ಬೆಳಗಲು ಸಾಧ್ಯ ಎಂದು ಶಾಸಕ ಕೆ. ರಘುಪತಿ ಭಟ್‌ ಹೇಳಿದರು.

Advertisement

ಅವರು ಮಂಗಳವಾರ ಬ್ರಹ್ಮಾವರ ನ್ಪೋರ್ಟ್ಸ್ ಕ್ಲಬ್‌ ಆಶ್ರಯದಲ್ಲಿ ಹೆರಂಜೆಯ ಕ್ಲಬ್‌ ನಿವೇಶನದಲ್ಲಿ ನಿರ್ಮಾಣಗೊಂಡ ಒಳಾಂಗಣ ಕ್ರೀಡಾಂಗಣ ಉದ್ಘಾಟಿಸಿ ಮಾತನಾಡಿದರು.

ಕೆಲವೇ ವರ್ಷಗಳಲ್ಲಿ ಉಡುಪಿ- ಬ್ರಹ್ಮಾವರ ಅವಳಿ ನಗರಗಳಾಗಲಿದ್ದು, ಸುಸಜ್ಜಿತ ಒಳಾಂಗಣ ಕ್ರೀಡಾಂಗಣವು ಕ್ರೀಡಾಸಕ್ತರಿಗೆ ಕೊಡುಗೆಯಾಗಿದೆ ಎಂದರು. ಶಾಸಕರ ನಿಧಿಯಿಂದ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಮಂಗಳೂರು ವಿ.ವಿ. ದೈ.ಶಿ. ವಿಭಾಗದ ನಿರ್ದೇಶಕ ಡಾ| ಕಿಶೋರ್‌ ಕುಮಾರ್‌ಸಿ.ಕೆ. ಅವರು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಉಡುಪಿ ಜಿಲ್ಲೆಯು ಕ್ರೀಡೆಯಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದೆ. ಹೃದಯ ಶ್ರೀಮಂತಿಕೆ ಇರುವಲ್ಲಿ ಕ್ರೀಡೆ ಬೆಳೆಯುತ್ತದೆ ಎಂದರು. ಬೆಂಗಳೂರು ಬಂಟರ ಸಂಘದ ಕಾರ್ಯದರ್ಶಿ ಮಧುಕರ ಎಂ. ಶೆಟ್ಟಿ ಅತಿಥಿಯಾಗಿದ್ದರು.
ದಾನಿಗಳ ನೆರವಿನಿಂದ ನಿರ್ಮಾಣ ಗೊಂಡ 2 ಬ್ಯಾಡ್ಮಿಂಟನ್‌ ಕೋರ್ಟ್‌, ಬೃಹತ್‌ ಫ್ಯಾನ್‌ ಉದ್ಘಾಟನೆಗೊಂಡಿತು. ಕ್ಲಬ್‌ ಅಧ್ಯಕ್ಷ ಎಂ. ಚಂದ್ರಶೇಖರ ಹೆಗ್ಡೆ ಸ್ವಾಗತಿಸಿ, ಕಾರ್ಯದರ್ಶಿ ಗ್ರೆಗೊರಿ ಡಿಸಿಲ್ವಾ ವಂದಿಸಿದರು. ಸುಶೀಲಾ ಆರ್‌. ರೈ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next