Advertisement

ಬ್ರಹ್ಮಾವರ: ಗುಜರಿ ಘಟಕಕ್ಕೆ ಬೆಂಕಿ

09:56 AM Oct 27, 2017 | Team Udayavani |

ಬ್ರಹ್ಮಾವರ: ಇಲ್ಲಿನ ಪೇಟೆಯಲ್ಲಿ ಬುಧವಾರ ರಾತ್ರಿ ಮಹಮ್ಮದ್‌ ಸಮೀರ್‌ ಅವರ ಗುಜರಿ ಸಂಗ್ರಹ ಘಟಕಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಬಹುತೇಕ ವಸ್ತುಗಳೆಲ್ಲ ಸುಟ್ಟು ಕರಕಲಾದವು. 

Advertisement

ರಾತ್ರಿ 10 ಗಂಟೆ ವೇಳೆಗೆ ಬೆಂಕಿ ಆವರಿಸತೊಡಗಿದ್ದು ಉಡುಪಿ ಅಗ್ನಿಶಾಮಕ ದಳದವರು ಸುಮಾರು 12 ಗಂಟೆ ಹೊತ್ತಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಗುಜರಿ ರಾಶಿಯಲ್ಲಿ ಬಾಟಲಿಗಳಿದ್ದುದರಿಂದ ಸ್ಫೋಟ ಶಬ್ದ ಆಗಾಗ ಕೇಳಿಬರುತ್ತಿತ್ತು. ಸಮೀಪದಲ್ಲಿಯೇ ವಾಣಿಜ್ಯ ಹಾಗೂ ವಸತಿ ಸಂಕೀರ್ಣಗಳಿದ್ದು ಸಕಾಲದಲ್ಲಿ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಘಟನೆಯಲ್ಲಿ ಸುಮಾರು ಒಂದು ಲಕ್ಷ ರೂ.ಗೂ ಮಿಕ್ಕಿ ನಷ್ಟ ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next