Advertisement

ಸಮುದಾಯದಲ್ಲಿ ಒಡಕು ಮೂಡಿಸುವ ಹುನ್ನಾರ: HDK ವಿರುದ್ಧ ವಿಜಯಪುರದಲ್ಲಿ ವಿಪ್ರರ ಪ್ರತಿಭಟನೆ

08:17 PM Feb 08, 2023 | Team Udayavani |

ವಿಜಯಪುರ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬ್ರಾಹ್ಮಣರ ಸಮುದಾಯದಲ್ಲಿ ಉತ್ತರ-ದಕ್ಷಿಣ ಎಂದು ಒಡಕು ಮೂಡಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಬ್ರಾಹ್ಮಣರು, ಕ್ಷಮೆ ಯಾಚಿಸುವಂತೆ ಆಗ್ರಹಿಸಿದರು.

Advertisement

ಬುಧವಾರ ನಗರದಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿಪ್ರರು, ಬ್ರಾಹ್ಮಣರ ಕುರಿತು ಅನಗತ್ಯವಾಗಿ ಬ್ರಾಹ್ಮಣ ಸಮಾಜವನ್ನು ದೂರುಲಾಗುತ್ತಿದೆ. ಹೀಗಾಗಿ ಕೂಡಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಮುದಾಯದ ಕ್ಷೇಮೆ ಕೋರುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬ್ರಾಹ್ಮಣ ಸಮಾಜದ ಮುಖಂಡ ರಾಘವ ಅಣ್ಣಿಗೇರಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಾಂಧೀಜಿ ಅವರನ್ನು ಹತ್ಯೆ ಮಾಡಿರುವ ನಾಥುರಾಮ ಗೋಡ್ಸೆ ಜಾತಿಯನ್ನೇ ಮುಂದಿಟ್ಟು ಕೊಂಡು ಬ್ರಾಹ್ಮಣರನ್ನು ನಿಂದಿಸುವ ಕೆಲಸ ಮಾಡಿದ್ದಾರೆ. ಬ್ರಾಹ್ಮಣರ ಬಗ್ಗೆ ಅನಗತ್ಯವಾಗಿ ಜಾತಿ ಹೆಸರಿನಲ್ಲಿ ನಿಂದನೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಯೋತ್ಪಾದಕರ ಜಾತಿಯನ್ನು ಮುಂದಿಟ್ಟುಕೊಂಡು ಅಲ್ಪಸಂಖ್ಯಾತ ಸಮುದಾಯ ನಿಂದನಿಸುವ ಧೈರ್ಯ, ತಾಕತ್ತು ಇಲ್ಲದ ಕುಮಾರಸ್ವಾಮಿ, ಆಧಾರ ರಹಿತವಾಗಿ ಆರೋಪ ಜಾತಿ ನಿಂದನೆ ಮಾಡುವ ಕೆಲಸದಲ್ಲಿನಿರತರಾಗಿದ್ದಾರೆ. ಕೂಡಲೇ ಕುಮಾರಸ್ವಾಮಿ ಬ್ರಾಹ್ಮಣ ಸಮಾಜದ ಕ್ಷಮೆ ಯಾಚಿಸಬೇಕು ಹಾಗೂ ಸರ್ಕಾರ ತಕ್ಷಣವೇ ಕುಮಾರಸ್ವಾಮಿ ಅವರನ್ನು ಬಂಧಿಸುವಂತೆ ಆಗ್ರಹಿಸಿದರು.

ಜಿಲ್ಲಾ ಕಾರ್ಯದರ್ಶಿ ಪವನ ಕುಲಕರ್ಣಿ, ಆನಂದ ಜೋಶಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬ್ರಾಹ್ಮಣ ವಿರೋಧಿ ಹೇಳಿಕೆ ಖಂಡನಾರ್ಹವಾಗಿದೆ. ಸರ್ವರ ಹಿತ ಬಯಸುವ ಬ್ರಾಹ್ಮಣ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿರುವ ಕ್ರಮದ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಅತಿಹೆಚ್ಚು ಬಲಿದಾನ ಗೈದವರು ಬ್ರಾಹ್ಮಣರು. ಸಾಮಾಜಿಕ ಚಳುವಳಿ ಚಳುವಳಿ, ಭಾಷೆ, ಧಾರ್ಮಿಕ ಸಂಗತಿಗಳಂಥ ವಿಷಯದಲ್ಲಿ ಬ್ರಾಹ್ಮಣ ಸಮುದಾಯದವರು ಮುಂಚೂಣಿಯಲ್ಲಿ ನಿಂತಿರುತ್ತಾರೆ. ಗಾಂಧಿಜೀ ಅವರನ್ನು ಕೊಂದಿರುವ ಗೋಡ್ಸೆ ಜಾತಿ ಮುಂದಿಟ್ಟುಕೊಂಡು ಇಡೀ ಬ್ರಾಹ್ಮಣ ಸಮಾಜವವನ್ನು ಅಪಮಾನಿಸಿದ ಕುರಿತು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಸಮಾಜದ ಜಿಲ್ಲಾಧ್ಯಕ್ಷ ಮುಕುಂದು ಕುಲಕರ್ಣಿ, ಉಪಾಧ್ಯಕ್ಷ ಭೀಮಸೇನ ನಾಯಕ, ಪ್ರಶಾಂತ ದೇಶಪಾಂಡೆ, ಸಮೀರ ಕುಲಕರ್ಣಿ, ಡಾ.ಆನಂದ ಕುಲಕರ್ಣಿ, ಶಂಕರ ಕುಲಕರ್ಣಿ, ಬಿ.ಜೆ ಪುರಾಣಿಕ, ಸಚಿನ ಫಡ್ನಿಸ್, ಪುರುಷೋತ್ತಮ ಕುಲಕರ್ಣಿ, ಡಾ.ರವಿ ಜಹಗೀರದಾರ, ರಾಘವೇಂದ್ರ ಕುಲಕರ್ಣಿ, ಕೃಷ್ಣ ಗುನ್ಹಾಳಕರ, ಮೀತಾ ದೇಸಾಯಿ, ಲಕ್ಷ್ಮೀ ಕುಲಕರ್ಣಿ, ಮೀನಾಕ್ಷಿ ಸಾವಳಗಿ, ಶ್ರೀರಕ್ಷಾ ಸೊನ್ನ, ಚೇತನ ದೇಶಪಾಂಡೆ, ರವಿ ಕುಲಕರ್ಣಿ, ದೀಪಕ ಕುಲಕರ್ಣಿ, ಶ್ರೀರಂಗ ಪುರಾಣಿಕ, ಸುಧೀಂದ್ರ ಇಳ್ಳಾಲ, ಗುರುರಾಜ ಇಳ್ಳಾಲ. ಶರದ್ ಅರ್ಜುಣಗಿ, ಸಂದೀಪ ಅರ್ಜುಣಗಿ, ಅರವಿಂದ ಜೋಶಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ರಾಹುಲ್‌ ಗಾಂಧಿ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಪ್ರಹ್ಲಾದ್‌ ಜೋಶಿ ಒತ್ತಾಯ

Advertisement

Udayavani is now on Telegram. Click here to join our channel and stay updated with the latest news.

Next