Advertisement

ಲೂಟಿಗೆ ಪ್ರತಿರೋಧಿಸಿದ ಬಾಲಕನನ್ನು ಇರಿದು ಕೊಂದ ದುಷ್ಕರ್ಮಿಗಳು

04:52 PM Mar 13, 2017 | udayavani editorial |

ಮಧುರೆ : ನಿನ್ನೆ ಭಾನುವಾರ ರಾತ್ರಿ ಮನೆಗೆ ಮರುಳುತ್ತಿದ್ದ ಪಿಯುಸಿ ವಿದ್ಯಾರ್ಥಿಯನ್ನು  ಇಲ್ಲಿನ ಈಸ್ಟ್‌ ಗೇಟ್‌ ಪ್ರದೇಶದಲ್ಲಿನ ರಸ್ತೆಯಲ್ಲಿ ಅಡ್ಡಗಟ್ಟಿ ಆತನ ಬಳಿ ಇದ್ದ ಮೊಬೈಲ್‌ ಫೋನ್‌ ಮತ್ತು ಸ್ವಲ್ಪ ನಗದು ಹಣವನ್ನು ಲೂಟಿ ಮಾಡಿದ ದುಷ್ಕರ್ಮಿಗಳ ಗ್ಯಾಂಗ್‌ ಒಂದು, ತಮಗೆ ಪ್ರತಿರೋಧ ಒಡ್ಡಿದ ಕಾರಣಕ್ಕೆ ಆತನನ್ನು ಬಲವಾಗಿ ಇರಿದು ಕೊಂದು ಪರಾರಿಯಾಗಿದೆ.

Advertisement

ಮೃತ ಬಾಲಕ ನಾಗರಾಜ್‌, ತನ್ನನ್ನು ಲೂಟಿ ಮಾಡಲೆತ್ನಿಸಿದ ದುಷ್ಕರ್ಮಿಗಳ ವಿರುದ್ಧ ಹೋರಾಡಿದ್ದ. ಆತನಿಂದ ಮೊಬೈಲ್‌ ಹಾಗೂ ನಗದನ್ನು ಕಸಿದ ದುಷ್ಕರ್ಮಿಗಳು ಬಳಿಕ ಆತನ ತೊಡೆಗೆ ಬಲವಾಗಿ ಇರಿದು ಪರಾರಿಯಾದರು.

ತೀವ್ರ ರಕ್ತಸ್ರಾವಕ್ಕೆ ಗುರಿಯಾಗಿದ್ದ ನಾಗರಾಜನನ್ನು ರಕ್ಷಿಸಲು ಯಾರೂ ಆಸುಪಾಸಿನಲ್ಲಿ ಇರಲಿಲ್ಲ. ಹಾಗಾಗಿ ಆತ ರಸ್ತೆಯಲ್ಲೇ ಅಸುನೀಗಿದ. ಮಧ್ಯರಾತ್ರಿಯ ಹೊತ್ತಿಗೆ ನಾಗರಾಜ್‌ ಸತ್ತಿರುವುದು ಗೊತ್ತಾಯಿತು. 

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದುಷ್ಕರ್ಮಿಗಳನ್ನು ಹಿಡಿಯಲು ವಿಶೇಷ ತಂಡವೊಂದನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next