Advertisement

Muddebihala: ಈಜಲು ಹೋದ ಬಾಲಕ ಸಾವು

02:33 PM Apr 08, 2023 | Team Udayavani |

ಮುದ್ದೇಬಿಹಾಳ: ತೆರೆದ ಬಾವಿಯಲ್ಲಿ ಈಜಲು ಸ್ನೇಹಿತರೊಂದಿಗೆ ಬಾವಿಗೆ ಜಿಗಿದ ಬಾಲಕನೊಬ್ಬ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಕೆಸಾಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.

Advertisement

ಮೃತ ಬಾಲಕನನ್ನು ಮಹಾರಾಷ್ಟ್ರದ ಪುಣೆ ನಿವಾಸಿ ರಘು ಲಕ್ಷ್ಮಣ ಧೋತ್ರೆ (16) ಎಂದು ಗುರುತಿಸಲಾಗಿದೆ.

ಬೇಸಿಗೆ ರಜೆಯ ಹಿನ್ನೆಲೆ ತಾಯಿಯ ತವರೂರು ಕೆಸಾಪುರಕ್ಕೆ ಬಂದಿದ್ದ ಬಾಲಕ ಊರಿನ ಗೆಳೆಯರೊಂದಿಗೆ ತನಗೆ ಸರಿಯಾಗಿ ಈಜು ಬರದಿದ್ದರೂ ಈಜು ಬರುತ್ತದೆ ಎಂದು ಆಳವಾದ ಬಾವಿಯಲ್ಲಿ ಜಿಗಿದವನು ಶವವಾಗಿ ಮೇಲೆದ್ದಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಬಾಲಕರು ತಿಳಿಸಿದ್ದಾರೆ.

ಘಟನೆ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಹೊರತೆಗೆದಾಗ ಕುಟುಂಬದವರು, ಬಂಧುಗಳ ಆಕ್ರಂದನ ಕರುಳು ಹಿಂಡುವಂತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next