Advertisement

ಗೋಕಾಕ-ಶಿಂಗಳಾಪುರ ಬ್ರಿಡ್ಜ್ ನಲ್ಲಿ ಮುಳುಗಿ ಯುವಕ ಕಣ್ಮರೆ

03:37 PM May 24, 2021 | Team Udayavani |

ಗೋಕಾಕ: ಹಿಡಕಲ್ ಜಲಾಶಯದಿಂದ ನೀರು ಹರಿ ಬಿಟ್ಟಿದ್ದರಿಂದ ನಗರದ ಶಿಂಗಳಾಪುರ ಬ್ರಿಡ್ಜ್ ನಲ್ಲಿ ಮುಳುಗಿ ಯುವಕನೋರ್ವ ನೀರು ಪಾಲಾದ ಘಟನೆ ಸೋಮವಾರ ಸಂಭವಿಸಿದೆ.

Advertisement

ಗೋಕಾಕ ನಗರದ ಮೋಮಿನ್ ಗಲ್ಲಿಯ ತೌಫಿಕ್ ನರೂ( 20) ಕಣ್ಮರೆಯಾಗಿದ್ದು‌, ಯುವಕ ತೌಫಿಕ್ ಗಾಗಿ ಶೋಧಕಾರ್ಯ ನಡೆಯುತ್ತಿದೆ. ಇನ್ನೂವರೆಗೆ ಯುವಕ ಪತ್ತೆ ಆಗಿಲ್ಲ. ಪೊಲೀಸರು ಹಾಗೂ ಸ್ಥಳೀಯರು ಶೋಧ ಕಾರ್ಯ ನಡೆಸಿದ್ದಾರೆ.

ಹಿಡಕಲ್ ಜಲಾಶಯದಿಂದ 4043 ಸಾವಿರ ಕ್ಯೂಸೆಕ್ ನೀರು ಹರಿ ಬಿಟ್ಟಿದ್ದರಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಶಿಂಗಳಾಪುರ ಸೇತುವೆ ಭರ್ತಿ ಆಗಿದೆ. ಈಜಲು ಹೋಗಿದ್ದ ಯುವಕ ಹರಿಯುವ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ರಾಜ್ಯದ ಸಂಘಟನೆ ವಿಚಾರ ಕುಮಾರಸ್ವಾಮಿ ನೋಡಿಕೊಳ್ತಾರೆ : ಹೆಚ್.ಡಿ. ದೇವೇಗೌಡ

Advertisement
Advertisement

Udayavani is now on Telegram. Click here to join our channel and stay updated with the latest news.

Next