Advertisement

ವೀರಶೈವ-ಲಿಂಗಾಯತ ಎರಡೂ ಒಂದೇ: ಕೇದಾರ ಶ್ರೀ

06:40 AM Dec 12, 2017 | |

ಹೊನ್ನಾಳಿ: ವೀರಶೈವ ಧರ್ಮ ಸನಾತನ ಧರ್ಮ, ವೀರಶೈವ ಮತ್ತು ಲಿಂಗಾಯತ ಎನ್ನುವುದು ಒಂದೇ. ಇವುಗಳನ್ನು ಯಾವ ಕಾರಣಕ್ಕೂ ಬೇರ್ಪಡಿಸುವಂತಿಲ್ಲ ಎಂದು ಕೇದಾರ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

Advertisement

ತಾಲೂಕಿನ ನ್ಯಾಮತಿ ಪಟ್ಟಣದಲ್ಲಿ ಹಿಮವತ್‌ ಕೇದಾರ ಜಗದ್ಗುರುಗಳ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಹಾಗೂ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿರುವ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ವೀರಶೈವ ಲಿಂಗಾಯತ ಧರ್ಮಕ್ಕಾಗಿ ತಾವು ಈಗಾಗಲೇ ಕೇದಾರ ಪೀಠದಲ್ಲಿ ಚರ್ಚಿಸಿ ಪ್ರಧಾನಿ ಮೋದಿ ಅವರು ಕೇದಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿವರವಾಗಿ ತಿಳಿಸಿ, ಈ ಬಗ್ಗೆ ಪತ್ರವನ್ನೂ ನೀಡಲಾಗಿದೆ. ಮಾತಿಗಿಂತ ಕೃತಿ ಲೇಸು ಎಂದು ತಾವು ಮಾತನಾಡದೇ ಕಾರ್ಯದಲ್ಲಿ ತೊಡಗಿದ್ದೇವೆ. 

ಪಂಚಾಚಾರ್ಯರು ವೀರಶೈವ ಧರ್ಮ ಸಂಸ್ಥಾಪಕರು, 12ನೇ ಶತಮಾನದಲ್ಲಿ ಬಸವಣ್ಣನವರು ವೀರಶೈವ ಧರ್ಮದ ಏಳ್ಗೆಗಾಗಿ ಮತ್ತಷ್ಟು ಶ್ರಮಿಸಿದರು. ಇದನ್ನೇ ಮುಂದಿಟ್ಟುಕೊಂಡು ವೀರಶೈವ ಧರ್ಮ ಬಸವಣ್ಣನಿಂದ ಸ್ಥಾಪಿಸಲ್ಪಟ್ಟಿತು ಎನ್ನುವುದು ಸಲ್ಲದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next