Advertisement

ಸಿದ್ದು ತಲೆಯಲ್ಲಿ ಸೆಗಣೆ ತುಂಬಿದೆ

12:16 AM Apr 02, 2019 | Sriram |

ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ಎಚ್‌.ಡಿ. ದೇವೇಗೌಡ ಕುಟುಂಬವೇ ರಾಜಕಾರಣ ಮಾಡುತ್ತಿದೆ. ಹಾಸನವನ್ನು ಮೊಮ್ಮಗನಿಗೆ ಬಿಟ್ಟು ಕೊಟ್ಟು ಗೌಡ್ರು ಕಣ್ಣೀರಿಟ್ಟಿದ್ದಾರೆ. ಗೌಡ್ರು ಮತ್ತು ಸಿಎಂ ಕುಮಾರಸ್ವಾಮಿ ಇಬ್ಬರೂ ಉತ್ತರ ಕುಮಾರರು ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತು ಮಾತಿಗೂ ಸಿದ್ದು ನನ್ನ ಬಗ್ಗೆ ಮಾತನಾಡುತ್ತಿದ್ದು, ಈಶ್ವರಪ್ಪನಿಗೆ ತಲೆಯಲ್ಲಿ ಮೆದಳು ಇಲ್ಲ ಎನ್ನುತ್ತಿದ್ದಾರೆ. ಮೆದುಳನ್ನು ವೈದ್ಯರು ಸರಿ ಮಾಡ್ತಾರೆ. ಆದರೆ ಅವರ ತಲೆಯಲ್ಲಿ ಸೆಗಣೆ ತುಂಬಿಕೊಂಡಿದೆ. ಅದನ್ನು ಯಾರಿಂದಲೂ ಸರಿ ಮಾಡಲಾಗದು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುರುಬರೇ ಸಿದ್ದುನ ಸೋಲಿಸಿದ್ದಾರೆ. ಮೈಸೂರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಜೆಡಿಎಸ್‌ನವರೇ ಸೋಲಿಸ್ತಾರೆ. ಮಂಡ್ಯ ಹಾಗೂ ತುಮಕೂರಿನಲ್ಲಿ ಕಾಂಗ್ರೆಸ್‌ನವರು ಜೆಡಿಎಸ್‌ ಅಭ್ಯರ್ಥಿಗಳನ್ನು ಸೋಲಿಸ್ತಾರೆ ಎಂದರು.

ಕರ್ನಾಟಕದಲ್ಲಿ ಬಿಜೆಪಿ ಮುಸ್ಲಿಂರಿಗೆ ಎಂಪಿ ಟಿಕೆಟ್‌ ಕೊಡಲ್ಲ. ಕೊಡುವುದೂ ಇಲ್ಲ. ಅವರು ಮೊದಲು ನಮ್ಮನ್ನು ಬೆಂಬಲಿಸಲಿ ಆ ನಂತರ ಪಕ್ಷ ವಿಚಾರ ಮಾಡುತ್ತೆ. ಬೇರೆ ರಾಜ್ಯದಲ್ಲಿ ಮುಸ್ಲಿಂರಿಗೆ ಟಿಕೆಟ್‌ ಕೊಟ್ಟಿದೆ. ಇತ್ತೀಚೆಗೆ ಮುಸ್ಲಿಂರಿಗೂ ಅರ್ಥ ಆಗುತ್ತಿದ್ದು, ಕಾಂಗ್ರೆಸ್‌ ನಮ್ಮನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು. ಇನ್ನೂ ಇಕ್ಬಾಲ್‌ ಅನ್ಸಾರಿ ಬಿಜೆಪಿ ಸೇರ್ಪಡೆ ವಿಚಾರ ಕುರಿತು ಮೊದಲು ನಮ್ಮ ಬಿಜೆಪಿ ಕಚೇರಿಯ ಕಸ ಕೂಡಿಸಲಿ ನಂತರ ಪಕ್ಷ ಟಿಕೆಟ್‌ ಕೊಡಬೇಕೋ? ಬೇಡವೋ ಎನ್ನುವುದನ್ನು ತೀರ್ಮಾನ ಮಾಡುತ್ತೆ ಎಂದರು.

ತಮ್ಮ ಮೇಲೆ ಪದೇಪದೆ ಸಿಎಂ ಕುಮಾರಸ್ವಾಮಿ ಅವರು ನೋಟ್‌ ಕೌಂಟಿಂಗ್‌ ಮೆಷಿನ್‌ ಇತ್ತು ಎಂದು ಆರೋಪ ಮಾಡುತ್ತಿದ್ದಾರೆ. ಹೌದು ನಾವು ಉದ್ಯಮ ಮಾಡುತ್ತಿದ್ದೇವೆ. ನೋಟ್‌ ಕೌಂಟಿಂಗ್‌ ಮೆಷಿನ್‌ ಇಟ್ಟುಕೊಂಡರೆ ತಪ್ಪೇನು? ನನ್ನ ಮನೆಯಲ್ಲಿ ನೋಟ್‌ ಕೌಂಟಿಂಗ್‌ ಮೆಷಿನ್‌ ಇದ್ರೆ, ಸಿಎಂ ಮನೆಯಲ್ಲಿ ನೋಟ್‌ ಪ್ರಿಂಟಿಂಗ್‌ ಮೆಷಿನ್‌ ಇದೆ.
– ಕೆ.ಎಸ್‌.ಈಶ್ವರಪ್ಪ, ಮಾಜಿ ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next