Advertisement

“ಅಪದ ಮಿತ್ರ’ಮೊಬೈಲ್‌ ಆ್ಯಪ್‌ ಬಿಡುಗಡೆಗಡೆಗೊಳಿಸಿ ಮುಖ್ಯಮಂತ್ರಿ ಬೊಮ್ಮಾಯಿ

11:07 PM Jul 22, 2022 | Team Udayavani |

ಬೆಂಗಳೂರು: ಪ್ರಕೃತಿ ವಿಕೋಪ ಸಂದರ್ಭದಲ್ಲಿ ಪ್ರಮಾ ಣೀಕೃತ ವಿಪತ್ತು ನಿರ್ವಹಣೆ ವ್ಯವಸ್ಥೆ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ನಗರದ ಹೊಟೇಲ್‌ನಲ್ಲಿ ಶುಕ್ರವಾರ ಕೇಂದ್ರ ಸರಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರ, ಗೃಹ ಮಂತ್ರಾಲಯ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಹಾಗೂ “ಅಪದ ಮಿತ್ರ’ ಮೊಬೈಲ್‌ ಆ್ಯಪ್‌ ಬಿಡು ಗಡೆಗೊಳಿಸಿ ಮಾತನಾಡಿದರು.

ವಿಪತ್ತು ನಿರ್ವಹಣೆಗೆ ಮಹತ್ವ ನೀಡಿ ಜವಾಬ್ದಾರಿಯಿಂದ ನಿರ್ವಹಿಸ ಬೇಕಾ ಗುತ್ತದೆ. ಈ ಚಿಂತನೆ ಯಿಂದ “ಅಪದ ಮಿತ್ರ’ ಆ್ಯಪ್‌ ರೂಪಿಸಲಾಗಿದೆ. ಸುಮಾರು ಒಂದು ಲಕ್ಷ ಸ್ವಯಂ ಸೇವಕರಿಗೆ ತರಬೇತಿ ನೀಡುವುದು ಉತ್ತಮ ಆರಂಭ. ಇಂತಹ ಸ್ವಯಂ ಸೇವಕರ ತಂಡಗಳಿಂದ ವಿಪತ್ತು ನಿರ್ವಹಣ ಕಾರ್ಯ ಸುಲಭ ಸಾಧ್ಯವಾಗಲಿದೆ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next