Advertisement

Naxal ನಂಟು ಪ್ರಕರಣ: ದೆಹಲಿ ವಿವಿ ಮಾಜಿ ಅಧ್ಯಾಪಕ ಸಾಯಿಬಾಬಾ ಖುಲಾಸೆ

09:41 PM Mar 05, 2024 | Team Udayavani |

ನಾಗ್ಪುರ: ನಕ್ಸಲರ ಜತೆಗಿನ ನಂಟು ಆರೋಪದ ಹಿನ್ನೆಲೆಯಲ್ಲಿ ದೆಹಲಿ ವಿವಿ ಮಾಜಿ ಪ್ರಾಧ್ಯಾಪಕ ಜಿ.ಎನ್‌.ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಲಾಗಿದೆ.

Advertisement

ಈ ಬಗ್ಗೆ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಮಂಗಳವಾರ ಆದೇಶ ನೀಡಿದೆ. ಅವರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಕೂಡ ರದ್ದುಗೊಳಿಸಿದೆ.

ನ್ಯಾ.ವಿನಯ್‌ ಜೋಶಿ ಮತ್ತು ನ್ಯಾ.ವಾಲ್ಮೀಕಿ ಎಸ್‌.ಎ. ಮಿನೇಜಸ್‌ ಅವರಿದ್ದ ವಿಭಾಗೀಯ ಪೀಠ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ ಐವರು ಆರೋಪಿಗಳನ್ನು ಕೂಡ ಖುಲಾಸೆಗೊಳಿಸಿದೆ. “ಆರೋಪಿಗಳ ವಿರುದ್ಧ ಪ್ರಕರಣವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫ‌ಲವಾಗಿದೆ’ ಎಂದು ನ್ಯಾಯಪೀಠ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next