Advertisement

Kannur ಬಾಂಬ್‌ ಸ್ಫೋಟ: ರಾಜಕೀಯ ವಾಕ್ಸಮರ ಶುರು

01:26 AM Apr 06, 2024 | Team Udayavani |

ಕಣ್ಣೂರು: ಲೋಕಸಭೆ ಚುನಾವಣೆ ಪ್ರಚಾ ರದ ಭರಾಟೆ ನಡುವೆಯೇ ಕೇರಳದ ಕಣ್ಣೂರಿನಲ್ಲಿ ಕಚ್ಚಾ ಬಾಂಬ್‌ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಒಬ್ಬ ಅಸುನೀಗಿದ್ದು, ಮತ್ತೊಬ್ಬ ಗಾಯ ಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಚಾರ ಕೇರಳದಲ್ಲಿ ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿದೆ.

Advertisement

ಸ್ಫೋಟದಲ್ಲಿ ಗಾಯಗೊಂಡ ಶೆರಿನ್‌ ಮತ್ತು ವಿನೀಶ್‌ನನ್ನು ಸ್ಥಳೀಯರು ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಗೆ ದಾಖ ಲಿ ಸಿದರು. ಆದರೆ ಚಿಕಿತ್ಸೆ ಫ‌ಲಕಾರಿಯಾ ಗದೆ ಶೆರಿನ್‌ ಮೃತಪಟ್ಟಿದ್ದು, ಅಂಗೈ ಕಳೆದಕೊಂಡು ಗಂಭೀರವಾಗಿ ಗಾಯ ಗೊಂಡಿರುವ ವಿನೇಶ್‌ಗೆ ಚಿಕಿತ್ಸೆ ನೀಡಲಾ ಗುತ್ತಿದೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಶೆರಿನ್‌ ಮತ್ತು ವಿನೀಶ್‌ ಸಿಪಿಎಂ ಕಾರ್ಯಕರ್ತರಾಗಿದ್ದಾರೆ. ಅವರಿಬ್ಬರು ಬಾಂಬ್‌ ತಯಾರಿಸುವ ವೇಳೆ ಸ್ಫೋಟ ಸಂಭವಿಸಿದೆ. ದಾಳಿಗಳನ್ನು ನಡೆಸಲು ಇವರನ್ನು ಸಿಪಿಎಂ ಬಳಸಿಕೊಳ್ಳುತ್ತಿತ್ತು’ ಎಂದು ಬಿಜೆಪಿ ಆರೋಪಿಸಿದೆ. ಗೃಹ ಖಾತೆಯನ್ನು ಹೊಂದಿರುವ ಸಿಎಂ ಪಿಣರಾಯಿ ವಿಜಯನ್‌ ಏಕೆ ಮೌನವಾಗಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ವಿ.ಡಿ.ಸತೀಶನ್‌ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next