Advertisement

‘ನಮ್ ಮಾಣಿ ಮದ್ವೆ ಪ್ರಸಂಗ’ ಹೇಳಲು’ ಬರುತ್ತಿದ್ದಾರೆ ಬಾಲಿವುಡ್ ನಟಿ ಲೋಪಮುದ್ರ

02:00 PM Jul 25, 2021 | Team Udayavani |

‘ನಮ್ ಮಾಣಿ ಮದ್ವೆ ಪ್ರಸಂಗ’ ಹೇಳಲು ಬಾಲಿವುಡ್ ನಿಂದ ನಟಿ ಲೋಪಮುದ್ರ ರೌತ್ ಬರುತ್ತಿದ್ದಾರೆ…

Advertisement

ಹೌದು, ಬಾಲಿವುಡ್ ಸುಂದರಿ ಲೋಪಮುದ್ರ ಕನ್ನಡ ಚಿತ್ರರಂಗಕ್ಕೆ ಪದಾಪರ್ಣೆ ಮಾಡುತ್ತಿದ್ದಾರೆ. ‘ನಮ್ ಮಣಿ ಮದ್ವೆ ಪ್ರಸಂಗ’ ಚಿತ್ರಕ್ಕೆ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ.

ನಟ ಹಾಗೂ ನಿರ್ದೇಶಕ ಹೇಮಂತ್ ಹೆಗ್ಡೆ ‘ನಮ್ ಮಣಿ ಮದ್ವೆ ಪ್ರಸಂಗ’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಕರಾವಳಿ ಕರ್ನಾಟಕದಲ್ಲಿ ಪ್ರಸ್ತುತ ಇರುವ ಸಾಮಾಜಿಕ ಸ್ಥಿತಿಗತಿಗಳ ಕುರಿತು ಕಥಾಹಂದರ ಈ ಸಿನಿಮಾ ಹೊಂದಿರಲಿದೆ. ಹೇಮಂತ್, ಈ ಚಿತ್ರಕ್ಕೆ ನಿರ್ದೇಶನದ ಜೊತೆ ನಟನೆಯನ್ನು ಮಾಡುತ್ತಿದ್ದಾರೆ.

ಇನ್ನು ವಿಭಿನ್ನವಾದ ಕಥೆ ಹೇಳಲು ಹೊರಡಿರುವ ಹೇಮಂತ್ ಅವರು ಈ ಚಿತ್ರಕ್ಕಾಗಿ ಬಾಲಿವುಡ್ ಬೆಡಗಿ ಲೋಪಮುದ್ರ ಅವರನ್ನು ಕರೆ ತರುತ್ತಿದ್ದಾರೆ. ಲೋಪಮುದ್ರ ಹಾಗೂ ಹೇಮಂತ್ ಅವರದು ಹಳೆಯ ಸ್ನೇಹ. 2018ರಲ್ಲಿ ತೆರೆ ಕಂಡಿದ್ದ ಹಿಂದಿಯ ಬೋಲ್ಡ್ ಸ್ಟೋರಿ ಸಿನಿಮಾದಲ್ಲಿ ಇವರಿಬ್ಬರು ತೆರೆ ಹಂಚಿಕೊಂಡಿದ್ದರು. ಇದೀಗ ಕನ್ನಡ ಸಿನಿಮಾದಲ್ಲಿ ಮತ್ತೊಮ್ಮೆ ಜೊತೆಯಾಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next