Advertisement

ಕೆಂಪೇಗೌಡರ ಮನೆಗೆ ಬಂತು ಬೊಲೆರೋ 

03:33 PM Jan 30, 2022 | Team Udayavani |

ತುಮಕೂರು: ಕಳೆದ ಶುಕ್ರವಾರದಂದು ತುಮಕೂರಿನ ಮಹೇಂದ್ರ ಶೋರೂಮ್‌ನಲ್ಲಿ ಬೊಲೆರೋ ವಾಹನ ಖರೀದಿಗೆ ಬಂದಿದ್ದ ವೇಳೆ ಅವಮಾನಕ್ಕೆ ಒಳಗಾಗಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದರಾಮನಪಾಳ್ಯದ ಯುವ ರೈತ ಕೆಂಪೇಗೌಡರಿಗೆ ಶೋರೂಂನಿಂದ ಶನಿವಾರ ಬೊಲೆರೋ ವಾಹನವನ್ನು ಹಸ್ತಾಂತರಿಸಿದ್ದು, ಕೆಂಪೇಗೌಡರ ಸಂತಸಕ್ಕೆ ಕಾರಣವಾಗಿದೆ.

Advertisement

ವಾಹನ ಖರೀದಿಗೆ ಆಗಮಿಸಿದ್ದ ವೇಳೆ ಶೋರೂಂ ಸೇಲ್ಸ್ ಏಜೆಂಟ್‌ ಒಬ್ಬ ರೈತ ಕೆಂಪೇಗೌಡ ಹಾಗೂ ಆತನ ಸ್ನೇಹಿತರಿಗೆ ನಿಮಗೆ ಖರೀದಿಸುವ ಯೋಗ್ಯತೆ ಇಲ್ಲ ಎಂದು ಅವಮಾನಿಸಿದ್ದು ಹಾಗೂ ಅರ್ಧ ಗಂಟೆಯಲ್ಲಿ 10 ಲಕ್ಷ ರೂ. ಜಮಾ ಮಾಡಿಕೊಂಡು ಅದೇ ಶೋ ರೋಂಗೆ ಖರೀದಿಗೆ ಬಂದದ್ದು, ಈ ಕ್ಷಣವೇ ತಮಗೆ ವಾಹನ ನೀಡಬೇಕೆಂದು ಪಟ್ಟು ಹಿಡಿದದ್ದು ದೇಶಾದ್ಯಂತ ಸುದ್ದಿಯಾಗಿತ್ತು. ಈಘಟನೆಯಿಂದ ಎಚ್ಚೆತ್ತ ಮಹೇಂದ್ರ ಗ್ರೂಪ್‌ನ ಮುಖ್ಯಸ್ಥ ಆನಂದ್‌ ಮಹೀಂದ್ರ ಅವರೇ ಘಟನೆ ಬಗ್ಗೆ ವಿಷಾದವ್ಯಕ್ತಪಡಿಸಿ, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.

ಶನಿವಾರ ಯುವ ರೈತ ಕೆಂಪೇಗೌಡರ ತುಮಕೂರಿನ ರಿಂಗ್‌ ರಸ್ತೆಯ ಮಹೇಂದ್ರ ಶೋರೂಂನಿಂದ ಬುಲೇರೋ ಪಿಕಪ್‌ ವಾಹನ ಹಸ್ತಾಂತರಿಸ ಲಾಗಿದೆ. ಈ ಬಗ್ಗೆಟ್ವೀಟ್‌ ಮಾಡಿರುವ ಸಂಸ್ಥೆಯ ಮುಖ್ಯಸ್ಥ ಆನಂದ್‌ಮಹೇಂದ್ರ, ಯುವ ರೈತ ಕೆಂಪೇಗೌಡ ತಮ್ಮ ಮಹೀಂದ್ರಕುಟುಂಬಕ್ಕೆ ಸೇರ್ಪಡೆಯಾಗಿದ್ದಾರೆ ಎನ್ನುವ ಮೂಲಕ ಪ್ರಕರಣಕ್ಕೆ ಅಂತ್ಯವಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next