Advertisement

ಬೋಳ: ಸಿಡಿಲು ಬಡಿದು ಮನೆಗೆ ಹಾನಿ

08:21 AM Sep 07, 2017 | Team Udayavani |

ಬೆಳ್ಮಣ್‌: ಕಾರ್ಕಳ ತಾಲೂಕಿನ ಬೋಳ ಕೋಡಿ ನಿವಾಸಿ ಕಿಶೋರ್‌ ಅವರ ಮನೆಗೆ ಸಿಡಿಲು ಬಡಿದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

Advertisement

ಬೋಳ ಗ್ರಾಮದ ಬಾನಂಗಡಿ ಪುಲ್ಲಂಜೆಯಲ್ಲಿ ಕ್ಯಾಟರಿಂಗ್‌ ನಡೆಸುತ್ತಿರುವ ಕಿಶೋರ್‌ ಕುಮಾರ್‌ ಅವರ ಮನೆಗೆ ಬುಧವಾರ ಮಧ್ಯಾಹ್ನದ ವೇಳೆಗೆ ಸಿಡಿಲು ಬಡಿಯಿತು. ವಿದ್ಯುತ್‌ ಮೀಟರ್‌, ವಯ ರಿಂಗ್‌ ಸಂಪೂರ್ಣ ಸುಟ್ಟು ಹೋಗಿವೆ. ಗೋಡೆ ಬಿರುಕು ಬಿಟ್ಟಿದೆ. ಟಿವಿ, ಫ್ರಿಜ್‌, ವಿದ್ಯುತ್‌ ಉಪಕರಣಗಳು ಹಾನಿ ಗೀಡಾಗಿದ್ದು ಸುಮಾರು 2 ಲಕ್ಷ ರೂ. ನ‌ಷ್ಟ ಸಂಭವಿಸಿದೆ.

ಅಪಾಯದಿಂದ ಪಾರು
ಕಿಶೋರ್‌ ಹಾಗೂ ಅವರ ತಾಯಿ ರೇಖಾ ಭಂಡಾರಿ ಅವರು ಮನೆಯ ಜಗಲಿಯಲ್ಲಿ ಕುಳಿತಿದ್ದ ಸಮಯದಲ್ಲಿ ಏಕಾಏಕಿ ಬಡಿದ ಸಿಡಿಲು ಅವರ ಪಕ್ಕದಲ್ಲಿಯೇ ಹಾದುಹೋಗಿ ಗೋಡೆಗೆ ಬಡಿಯಿತು. ಮನೆ ಹಾನಿಗೀಡಾದರೂ ತಾಯಿ, ಮಗ ಇಬ್ಬರೂ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. 

ಘಟನಾ ಸ್ಥಳಕ್ಕೆ ಮಾಜಿ ಶಾಸಕ ಗೋಪಾಲ ಭಂಡಾರಿ, ತಾ.ಪಂ. ಮಾಜಿ ಸದಸ್ಯ ಕ್ಸೇವಿಯರ್‌ ಡಿ’ಮೆಲ್ಲೊ, ತಾ.ಪಂ. ಸದಸ್ಯೆ ಪುಷ್ಪಾ ಸತೀಶ್‌, ಬೋಳ ಗ್ರಾ.ಪಂ. ಸದಸ್ಯ ಸತೀಶ್‌ ಪೂಜಾರಿ ಭೇಟಿ ನೀಡಿದರು. ಗ್ರಾ.ಪಂ.ನ ಕಂದಾಯ ಅ ಧಿಕಾರಿ ಸುದರ್ಶನ್‌, ಪಿಡಿಒ ಹರೀಶ್‌ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಸೂಕ್ತ ಪರಿಹಾರ ದೊರಕಿಸುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next