Advertisement

ಬೋಫೋರ್ಸ್‌:12 ವರ್ಷ ಬಳಿಕ ಮೇಲ್ಮನವಿ

11:10 AM Feb 03, 2018 | Karthik A |

ಹೊಸದಿಲ್ಲಿ: ಬೋಫೋರ್ಸ್‌ ಅವ್ಯವಹಾರಕ್ಕೆ ಸಂಬಂಧಿಸಿದಂತೆ 12 ವರ್ಷಗಳ ಹಿಂದೆ ದಿಲ್ಲಿ ಹೈಕೋರ್ಟ್‌ ಹಿಂದೂಜಾ ಸಹೋದರರು ಸೇರಿದಂತೆ ಮೂವರನ್ನು ದೋಷಮುಕ್ತಗೊಳಿಸಿದ್ದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟಲ್ಲಿ ಮೇಲ್ಮನವಿ ಸಲ್ಲಿಸಿದೆ. ಇಂಥ ಪ್ರಯತ್ನ ಬೇಡ ಎಂದು ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಕೇಂದ್ರ ತನಿಖಾ ಸಂಸ್ಥೆಗೆ ಸಲಹೆ ನೀಡಿ ಪತ್ರ ಬರೆದಿದ್ದರು. ಆದೇಶದ ವಿರುದ್ಧ ಕೆಲ ದಾಖಲೆಗಳು ಮತ್ತು ಸಾಕ್ಷ್ಯಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಕಾನೂನು ಸಲಹೆಗಾರರು ಮೇಲ್ಮನವಿ ಸಲ್ಲಿಸಬಹುದು ಎಂದು ಸಲಹೆ ಮಾಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ದಿಲ್ಲಿಯ ಬಿಜೆಪಿ ನಾಯಕ ಅಜಯ್‌ ಅಗರ್ವಾಲ್‌ ಈ ಬಗ್ಗೆ ಮನವಿ ಸಲ್ಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next