Advertisement

ಆಗಸ್ಟ್ 24ರಂದು ಲಕ್ಕವಳ್ಳಿ ಭದ್ರಾ ನಾಲೆಗೆ ಬಿದ್ದ ಸರ್ವಮಂಗಳ ಮೃತದೇಹ ಇಂದು ಪತ್ತೆ

03:56 PM Aug 27, 2020 | keerthan |

ಚಿಕ್ಕಮಗಳೂರು: ಬೊಲೆರೋ ವಾಹನ ಸಮೇತ ದಂಪತಿ ಭದ್ರಾ ನಾಲೆಗೆ ಬಿದ್ದ ಪ್ರಕರಣದಲ್ಲಿ ನೀರು ಪಾಲಾಗಿದ್ದ ಮಹಿಳೆಯ ಮೃತದೇಹ ಇಂದು ಪತ್ತೆಯಾಗಿದೆ.

Advertisement

ಆಗಸ್ಟ್ 24ರಂದು ಲಕ್ಕವಳ್ಳಿ ಸಮೀಪ ನಡೆದ ಘಟನೆಯಲ್ಲಿ ನೀರು ಪಾಲಾಗಿದ್ದ ಸರ್ವಮಂಗಳ (32) ಮೃತ ದುರ್ದೈವಿ.

ತರೀಕೆರೆ ತಾಲೂಕಿನ ವಡ್ಡರದಿಬ್ಬ ಗ್ರಾಮದ ಭದ್ರಾ ನಾಲೆಯಲ್ಲಿ ಮಹಿಳೆ ಮೃತದೇಹ ಇಂದು ಪತ್ತೆಯಾಗಿದೆ.

ಕಳೆದ ಸೋಮವಾರ ಬೊಲೆರೋದಲ್ಲಿ ಹೋಗುತ್ತಿದ್ದ ದಂಪತಿ ನಿಯಂತ್ರಣ ತಪ್ಪಿ ನಾಲೆಗೆ ಬಿದ್ದಿದ್ದರು. ಈ ವೇಳೆ ಪ್ರಾಣಪಾಯದಿಂದ ಪತಿ ಸಂತೋಷ್ ಪಾರಾಗಿದ್ದರು ಸಂತೋಷ್ ಪತ್ನಿ ಸರ್ವಮಂಗಳ ಮೃತದೇಹಕ್ಕೆ ಶೋಧ ನಡೆದಿತ್ತು.

ಇದನ್ನೂ ಓದಿ: ಪ್ರವಾಹ ಹಾನಿ ಪರಿಶೀಲನೆಗಾಗಿ ರಾಜ್ಯಕ್ಕೆ ಕೇಂದ್ರ ಅಧ್ಯಯನ ತಂಡ: ಸಚಿವ ಅಶೋಕ್

Advertisement

ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next