Advertisement

ಬಸವನಬಾಗೇವಾಡಿ: ಹಳ್ಳದಲ್ಲಿ ಕೊಚ್ಚಿಹೋಗಿದ್ದ ಯುವಕ ಶವವಾಗಿ ಪತ್ತೆ

03:52 PM Aug 29, 2021 | keerthan |

ವಿಜಯಪುರ: ಶುಕ್ರವಾರ ರಾತ್ರಿ ಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ದೋಣಿ ನದಿಯಲ್ಲಿ ಭಾನುವಾರ ಪತ್ತೆಯಾಗಿದೆ.

Advertisement

22 ವರ್ಷದ ಮಂಜುನಾಥ ಸಿದ್ದನಗೌಡ ಪಾಟೀಲ್ ತನ್ನ ಸ್ನೆರಹಿತನೊಂದಿಗೆ ತುಂಬಿ ಹರಿಯುವ ಹಳ್ಳ ದಾಟುವಾಗ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರು.

ಬಸವನಬಾಗೇವಾಡಿ ತಾಲೂಕಿನ ನೇಗಿನಾಳ-ಮುಳ್ಳಾಳ ಹಳ್ಳದಲ್ಲಿ ಸಂಭವಿಸಿದ್ದ ಘಟನೆಯಲ್ಲಿ ಸ್ಥಳೀಯರು ಓರ್ವನನ್ನು ರಕ್ಷಿಸಿದ್ದರು. ನಾಪತ್ತೆಯಾಗಿದ್ದ ಮಂಜುನಾಥನಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹಳ್ಳ ಹಾಗೂ ಅನತಿ ದೂರದಲ್ಲಿ ಹರಿಯುವ ಡೋಣಿ ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದರು.

ಇದನ್ನೂ ಓದಿ:ತಾಲಿಬಾನ್ ಹೊಸ ನಿಯಮ: ಸಂಗೀತ, ಟಿವಿ-ರೇಡಿಯೋಗಳಲ್ಲಿ ಮಹಿಳೆಯರ ಧ್ವನಿಗೂ ಇಲ್ಲ ಅವಕಾಶ!

ಭಾನುವಾರ ನೇಗಿನಾಳ-ಮುಳ್ಳಾಳ ಹಳ್ಳದಿಂದ ಕೆಲವೇ ಮೀಟರ್ ದೂರದಲ್ಲಿರುವ ಡೋಣಿ ನದಿಯಲ್ಲಿ ಭಾನುವಾರ ಮಧ್ಯಾಹ್ನ ಮಂಜುನಾಥನ ಶವ ಪತ್ತೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next