Advertisement

ಮಲ್ಪೆಯಲ್ಲಿ ಬೋಟ್‌ ಮುಳುಗಡೆ; 7 ಮೀನುಗಾರರ ರಕ್ಷಣೆ, 80 ಲಕ್ಷ ರೂ. ನಷ್ಟ

10:37 PM Aug 24, 2020 | mahesh |

ಮಲ್ಪೆ: ಮೀನುಗಾರಿಕೆಗೆ ತೆರಳಿದ ಆಳಸಮುದ್ರ ಬೋಟೊಂದು ಮಲ್ಪೆ ಬಂದರಿನಿಂದ ಸುಮಾರು 2.22 ನಾಟಿಕಲ್‌ ಮೈಲು ದೂರದಲ್ಲಿ ಬಂಡೆಗೆ ಢಿಕ್ಕಿ ಹೊಡೆದು ಮುಳುಗಿರುವ ಘಟನೆ ಸೋಮವಾರ ಮುಂಜಾನೆ ಸಂಭವಿಸಿದೆ. ಬೋಟಿನಲ್ಲಿದ್ದ ಏಳು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

Advertisement

ಉದ್ಯಾವರ ಪಿತ್ರೋಡಿಯ ಗಿರೀಶ್‌ ಸುವರ್ಣ ಅವರಿಗೆ ಸೇರಿದ ಬಾಹುಬಲಿ ಬೋಟ್‌ ಸೋಮವಾರ ಮುಂಜಾನೆ 3.30ಕ್ಕೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. 5.30ರ ವೇಳೆಗೆ ಬಂದರಿನಿಂದ 2.22 ನಾಟಿಕಲ್‌ ದೂರ ತಲುಪಿದಾಗ ಅಲೆಗಳ ಅಬ್ಬರಕ್ಕೆ ಬೋಟು ನಿಯಂತ್ರಣ ಕಳೆದುಕೊಂಡು ಬಂಡೆಕಲ್ಲಿಗೆ ಢಿಕ್ಕಿ ಹೊಡೆಯಿತು. ಬೋಟಿನ ತಳಭಾಗ ಜಖಂಗೊಂಡು ಎಂಜಿನ್‌ ಕೊಠಡಿಯೊಳಗೆ ನೀರು ಹೊಕ್ಕು ಮುಳುಗಲಾರಂಭಿಸಿತು.

ತತ್‌ಕ್ಷಣ ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ತವಕಲ್‌ ಬೋಟಿನವರು ಧಾವಿಸಿ ಬಂದು ಎಲ್ಲ ಮೀನುಗಾರರನ್ನು ರಕ್ಷಿಸಿದರೂ ಮುಳುಗುತ್ತಿದ್ದ ಬೋಟನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಬೋಟಿನಲ್ಲಿದ್ದ ಡೀಸೆಲ್‌, ಬಲೆ ಮಂಜುಗಡ್ಡೆ ಸೇರಿ 80 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next