Advertisement

ಕಾರವಾರ: ಕಡಲಿನಲ್ಲಿ ಮುಳುಗುತ್ತಿದ್ದ ಮೀನುಗಾರಿಕಾ ಬೋಟ್ ನಲ್ಲಿದ್ದ 8 ಮಂದಿ ರಕ್ಷಣೆ

09:40 AM Sep 21, 2019 | Team Udayavani |

ಮಂಗಳೂರು: ಎಂಜಿನ್‌ ವೈಫಲ್ಯದಿಂದ ಕಾರವಾರ ಬಂದರಿನ ಬಳಿ ಮುಳುಗುವ ಹಂತದಲ್ಲಿದ್ದ ಮೀನುಗಾರಿಕಾ ಬೋಟ್‌ ಒಂದನ್ನು ಕರಾವಳಿ ಕಾವಲು ಪಡೆ ರಕ್ಷಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

Advertisement

ಶ್ರೀ ದುರ್ಗಾ ಎಂಬ ಹೆಸರಿನ ಹಡಗು ಮುಳುಗುವ ಹಂತದಲ್ಲಿದ್ದ ಬಗ್ಗೆ ಕಾರವಾರ ಮೀನುಗಾರಿಕೆ ಇಲಾಖೆಗೆ ಮಾಹಿತಿ ಬಂದಿತ್ತು. ಆ ಕೂಡಲೇ ಆ ಮಾಹಿತಿಯನ್ನು ಕರಾವಳಿ ಕಾವಲು ಪಡೆಗೆ ರವಾನಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ಬೋಟ್‌ ಇರುವ ಸ್ಥಳಕ್ಕೆ ತೆರಳಿದ ಕರಾವಳಿ ಕಾವಲು ಪಡೆ ಅದರಲ್ಲಿದ್ದ ಎಂಟು ಮಂದಿಯನ್ನು ರಕ್ಷಿಸಿದ್ದರು. ಇದರೊಂದಿಗೆ ಬೋಟ್‌ ಅನ್ನು ಟೋಯಿಂಗ್‌ ಮೂಲಕ ಕಾರವಾರ ಬಂದಿರಿಗೆ ತರಲಾಗಿದೆ.

ಬೋಟ್‌ ಮತ್ತು ಅದರಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ದಡಕ್ಕೆ ಸೇರಿಸಲಾಗಿದ್ದು, ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next