Advertisement

ಆಳಸಮುದ್ರಕ್ಕೆ ತೆರಳುತ್ತಿಲ್ಲ ಬೋಟ್‌

11:11 AM Sep 11, 2019 | Team Udayavani |

ಪಣಜಿ: ಗೋವಾದಲ್ಲಿ ಮಳೆಗಾಲದಲ್ಲಿ ಮೀನುಗಾರಿಕೆ ನಡೆಸದಂತೆ ಹೇರಿದ್ದ ನಿರ್ಬಂಧ ತೆರವುಗೊಂಡು ತಿಂಗಳು ಕಳೆದರೂ ಹವಾಮಾನ ವೈಪರೀತ್ಯದಿಂದಾಗಿ ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳಲು ಮೀನುಗಾರರ ಬಳಿ ಸಾಧ್ಯವಾಗದೆಯೇ ಮೀನುಗಾರರು ಹೆಚ್ಚಿನ ನಷ್ಟ ಅನುಭವಿಸುವಂತಾಗಿದೆ.

Advertisement

ಪಣಜಿ ಸಮೀಪದ ಮಾಲಿಮ್‌ ಜೆಟ್ಟಿಯಲ್ಲಿ ಸುಮಾರು 200 ಮೀನುಗಾರಿಕಾ ಬೋಟ್‌ಗಳು ದಡದಲ್ಲಿಯೇ ನಿಂತಿವೆ. ಅಂತೆಯೇ ರಾಜ್ಯದ ಇತರ ಜೆಟ್ಟಿಗಳಲ್ಲಿಯೂ ಮೀನುಗಾರಿಕಾ ಬೋಟ್‌ಗಳು ಮೀನುಗಾರಿಕೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಮೀನುಗಾರಿಕಾ ಬೋಟ್‌ಗಳ ಕಾರ್ಮಿಕರಿಗೆ ದಿನಕ್ಕೆ ಊಟ-ತಿಂಡಿ ಇತರ ಖರ್ಚು ಬಿಟ್ಟು ಒಬ್ಬರಿಗೆ 400 ರೂ. ವೇತನ ನೀಡಬೇಕಾಗುತ್ತದೆ. ಆದರೆ ಆಳಸಮುದ್ರಕ್ಕೆ ತೆರಳಲು ಸಾಧ್ಯವಾಗದಿದ್ದರೂ ವೇತನ ನೀಡಲೇ ಬೇಕು. ಇದರಿಂದಾಗಿ ಮೀನುಗಾರಿಕಾ ಬೋಟ್ ಹೊಂದಿದ ಮೀನುಗಾರರು ಹೆಚ್ಚಿನ ನಷ್ಟ ಅನುಭವಿಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next