Advertisement

ಅಲೆಗಳ ಅಬ್ಬರಕ್ಕೆ ಸಿಲುಕಿ ದಂಡೆಗೆ ಅಪ್ಪಳಿಸಿದ ದೋಣಿ ಜಖಂ

05:11 PM May 07, 2019 | Lakshmi GovindaRaj |

ಮಂಗಳೂರು: ನಗರದ ಹಳೇ ಬಂದರು ದಕ್ಕೆಯಲ್ಲಿ ಹಗ್ಗ ಕಟ್ಟಿ ಲಂಗರು ಹಾಕಿದ್ದ ಪ್ರಾವಿಡೆನ್ಸ್‌’ ಹೆಸರಿನ ಮೀನುಗಾರಿಕಾ ದೋಣಿ (ಟ್ರಾಲ್‌ ಬೋಟ್‌) ಸೋಮವಾರ ಮುಂಜಾನೆ ಹಗ್ಗ ತುಂಡಾಗಿ ಸುಮಾರು 400 ಮೀ. ದೂರ ನದಿ ನೀರಿನಲ್ಲಿ ಚಲಿಸಿ ಅಳಿವೆ ಬಾಗಿಲಿನ ಬಳಿ ದಡಕ್ಕೆ ಅಪ್ಪಳಿಸಿ ಕಲ್ಲಿನ ಮೇಲೆ ಬಿದ್ದು ಹಾನಿಗೀಡಾಗಿದೆ.

Advertisement

ಬಜಾಲ್‌ನ ರೋನಿ ಮತ್ತು ಮೌರಿಸ್‌ ಡಿ’ಸೋಜಾ ಅವರ ಮಾಲೀಕತ್ವದ ಈ ಬೋಟ್‌ ಸಹಿತ ಹಲವು ಬೋಟ್‌ಗಳು 2 ತಿಂಗಳಿಂದ ಹೊಗೆ ಬಜಾರ್‌ನ ಹೊಸ ದಕ್ಕೆಯಲ್ಲಿ ಲಂಗರು ಹಾಕಿದ್ದವು. ಪ್ರಾವಿಡೆನ್ಸ್‌’ ಬೋಟ್‌ ಸಹಿತ ನಾಲ್ಕು ಬೋಟ್‌ಗಳನ್ನು ಒಂದೇ ಹಗ್ಗದಿಂದ ಕಟ್ಟಿದ್ದು, ಸೋಮವಾರ ಮುಂಜಾನೆ ವೇಳೆಗೆ ಬಲವಾದ ಗಾಳಿ ಬೀಸಿದ ಪರಿಣಾಮ ಸೃಷ್ಟಿಯಾದ ಅಲೆಗಳ ರಭಸಕ್ಕೆ ಹಗ್ಗ ತುಂಡಾಗಿ ಫ‌ಲ್ಗುಣಿ ನದಿಯಲ್ಲಿ ತೇಲುತ್ತಾ ಮುಂದೆ ಸಾಗಿದ್ದವು.

ಪ್ರಾವಿಡೆನ್ಸ್‌ ಬೋಟ್‌ ಹೊರತಾಗಿ ಉಳಿದ ಮೂರನ್ನು ರಕ್ಷಿಸುವಲ್ಲಿ ಮೀನುಗಾರರು ಯಶಸ್ವಿಯಾಗಿದ್ದರು. ಬೇರೆ ಬೋಟ್‌ಗಳ ಸಹಾಯದಿಂದ ಅದನ್ನು ನೀರಿಗೆ ಇಳಿಸಿ ದಕ್ಕೆಗೆ ಎಳೆದು ತರಲು ದಿನವಿಡೀ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ಪ್ರಾವಿಡೆನ್ಸ್‌ ಬೋಟ್‌ನ ಮಾಲಿಕ ಮೌರಿಸ್‌ ಡಿ’ಸೋಜಾ ತಿಳಿಸಿದ್ದಾರೆ. ಹಾನಿಯ ಪ್ರಮಾಣ ಎಷ್ಟೆಂದು ಅಂದಾಜಿಸಿಲ್ಲ. ಅದನ್ನು ಧಕ್ಕೆಗೆ ತಂದು ಪರಿಶೀಲಿಸಿದ ಬಳಿಕವೇ ನಷ್ಟದ ಪ್ರಮಾಣವನ್ನು ಲೆಕ್ಕ ಹಾಕಲಾಗುವುದು ಎಂದವರು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next