Advertisement

Bengaluru: ಬಿಎಂಟಿಸಿ ಬಸ್‌ ಹರಿದು ಬೈಕ್‌ ಸವಾರ ದುರ್ಮರಣ

10:07 AM Oct 01, 2024 | Team Udayavani |

ಬೆಂಗಳೂರು: ಬೈಕ್‌ ಸವಾರನ ಮೇಲೆ ಬಿಎಂಟಿಸಿ ಬಸ್‌ನ ಚಕ್ರಗಳು ಹರಿದು ಅಕ್ಕಸಾಲಿಗರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಯಶವಂತಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

Advertisement

ವಿದ್ಯಾರಣ್ಯಪುರದ ತಿಂಡ್ಲು ನಿವಾಸಿ ಈಶ್ವರ್‌(44) ಮೃತರು. ಸೋಮವಾರ ಮಧ್ಯಾಹ್ನ ತಿಂಡ್ಲು ಸಮೀಪದ ಕೆಪಿಟಿಸಿಎಲ್‌ನ ಕಚೇರಿ ಬಳಿ ದುರ್ಘ‌ಟನೆ ನಡೆದಿದೆ.

ಚಿಕ್ಕಬಳ್ಳಾಪುರ ಮೂಲದ ಈಶ್ವರ್‌, ಕೆಲ ವರ್ಷಗಳಿಂದ ಪತ್ನಿ ಮತ್ತು ಇಬ್ಬರು ಮಕ್ಕಳ ಜತೆ ತಿಂಡ್ಲುವಿನಲ್ಲಿ ವಾಸವಾಗಿದ್ದರು. ಜೀವನಕ್ಕಾಗಿ ಅಕ್ಕಸಾಲಿಗ ವೃತ್ತಿ ಮಾಡಿಕೊಂಡಿದ್ದರು. ಸೋಮವಾರ ಮಧ್ಯಾಹ್ನ ಮನೆಯಿಂದ ಅವೆನ್ಯೂ ರಸ್ತೆಗೆ ಕೆಲಸ ನಿಮಿತ್ತ ಬೈಕ್‌ನಲ್ಲಿ ಹೊರಟಿದ್ದಾರೆ. ಕೆಪಿಟಿಸಿಎಲ್‌ ಕಚೇರಿ ಸಮೀಪದಲ್ಲಿ ಈಶ್ವರ್‌ ಬೈಕ್‌ಗೆ ಕಾರೊಂದು ತಗುಲಿಸಿದ ಪರಿಣಾಮ ಕೆಳಗೆ ಬಿದ್ದಿದ್ದಾರೆ. ಅದೇ ವೇಳೆ ಯಶವಂತಪುರದಿಂದ ಯಲಹಂಕಕ್ಕೆ ಹೋಗುತ್ತಿದ್ದ ಬಿಎಂಟಿಸಿ ಬಸ್‌ನ ಹಿಂಬದಿ ಚಕ್ರಗಳು ಈಶ್ವರ್‌ ತಲೆ ಮೇಲೆ ಹರಿದು ತೀವ್ರ ರಕ್ತಸ್ರಾವ ಅವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

ಹೆಲ್ಮೆಟ್‌ ಧರಿಸಿದರೂ ಉಳಿಯಲಿಲ್ಲ ಜೀವ: ಈಶ್ವರ್‌, ಹೆಲ್ಮೆಟ್‌ ಧರಿಸಿಕೊಂಡು ಬೈಕ್‌ ಚಾಲನೆ ಮಾಡುತ್ತಿದ್ದರು. ಆದರೆ, ಏಕಾಏಕಿ ಕಾರು ತಗುಲಿದ್ದರಿಂದ ಕೆಳಗೆ ಬಿದ್ದ ಪರಿಣಾಮ ಅವರ ಮೇಲೆ ಬಸ್‌ನ ಚಕ್ರಗಳು ಹರಿದಿದೆ. ಬಸ್‌ ಚಾಲನೆ ವೇಗಕ್ಕೆ ತಲೆಯ ಅರ್ಧ ಭಾಗ ಅಪ್ಪಚ್ಚಿಯಾಗಿದೆ. ಸದ್ಯ ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಬಸ್‌ ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next