Advertisement

BMTC: ಬಸ್‌ ಚಾಲಕನ ಅಜಾಗರೂಕತೆಗೆ ಮಗು ಬಲಿ

10:28 AM Aug 17, 2023 | Team Udayavani |

ಬೆಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ನಾಲ್ಕುವರೆ ವರ್ಷದ ಹೆಣ್ಣು ಮಗು ಸೇರಿ ಮೂವರು ಮೃತಪಟ್ಟಿದ್ದಾರೆ.ಬಿಎಂಟಿಸಿ ಬಸ್‌ ಹರಿದು ನಾಲ್ಕುವರೆ ವರ್ಷದ ಹೆಣ್ಣುಹೆಣ್ಮು ಮಗು ಮೃತಪಟ್ಟಿರುವ ಘಟನೆ ಕುಮಾರಸ್ವಾಮಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

Advertisement

ಉತ್ತರಹಳ್ಳಿ ನಿವಾಸಿ ಎಂ.ಎಸ್‌.ಪ್ರಸನ್ನ ಎಂಬವರ ಪುತ್ರಿ ಪೂರ್ವಿ ರಾವ್‌ (4.5) ಮೃತ ಮಗು. ಈ ಸಂಬಂಧ ಬಿಎಂಟಿಸಿ ಬಸ್‌ ಚಾಲಕ ಬಸವರಾಜ್‌ ಪೂಜಾರಿ (47) ಎಂಬಾತನನ್ನು ಬಂಧಿಸಲಾಗಿದೆ.

ಮೈಸೂರು ಮೂಲದ ಪ್ರಸನ್ನ ನಗರದಲ್ಲಿ ಸಿಸ್ಕೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಉತ್ತರಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ. ಪುತ್ರಿ ಪೂರ್ವಿ ರಾವ್‌ ಸಮೀಪದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು. ಹೀಗಾಗಿ ತಂದೆ ಪ್ರಸನ್ನ ನಿತ್ಯ ಮಗಳನ್ನು ಶಾಲೆಗೆ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದರು. ಅದೇ ರೀತಿ ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಆಕೆಯನ್ನು ಶಾಲೆಗೆ ಕರೆದೊಯ್ಯುತ್ತಿದ್ದರು. ಅದೇ ವೇಳೆ ಸುಬ್ರಹ್ಮಣ್ಯಪುರ ಮುಖ್ಯರಸ್ತೆಯ ಉತ್ತರಹಳ್ಳಿ ಸರ್ಕಲ್‌ ಕಡೆಯಿಂದ ವಸಂತಪುರ ಕಡೆಗೆ ಬಿಎಂಟಿಸಿ ಚಾಲಕ ಬಸವರಾಜ್‌ ಪೂಜಾರಿ ಬಸ್‌ ಅನ್ನು ಅತೀವೇಗ ಮತ್ತು ನಿರ್ಲಕ್ಷ್ಯತೆಯಿಂದ ಚಾಲನೆ ಮಾಡಿಕೊಂಡು ಬಂದು ಪದ್ಮಾವತಿ ಸಿಲ್ಕ್ ಹತ್ತಿರ ಪ್ರಸನ್ನರ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಪ್ರಸನ್ನ ಬಲಕಾಲಿಗೆ ಪೆಟ್ಟಾಗಿ ಬೈಕ್‌ನ ಎಡಬದಿಗೆ ಬಿದ್ದಿದ್ದಾರೆ. ಪೂರ್ವಿರಾವ್‌ ಬೈಕ್‌ನ ಬಲಭಾಗಕ್ಕೆ ಬಿದ್ದಿದ್ದು, ಆಕೆ ಮೇಲೆ ಬಸ್‌ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಸಂಬಂಧ ಬಸ್‌ ಚಾಲಕನ ವಿರುದ್ಧ ಕೇಸ್‌ ದಾಖಲಿಸಿ ಬಂಧಿಸಲಾಗಿದೆ ಎಂದು ಕುಮಾರಸ್ವಾಮಿ ಲೇಔಟ್‌ ಸಂಚಾರ ಠಾಣೆ ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next