Advertisement

ಕೆಎಂಸಿಯಲ್ಲಿ ಸುರಕ್ಷಾ ಕ್ರಮಗಳೊಂದಿಗೆ ರಕ್ತದಾನ

06:37 PM May 12, 2020 | sudhir |

ಉಡುಪಿ: ಮಣಿಪಾಲ ಕೆಎಂಸಿ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಶಿಬಿರ ಶುಕ್ರವಾರ ಜರಗಿತು. ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದ ರಕ್ತದ ಆಪತ್ಭಾಂಧವ ಸತೀಶ್‌ ಸಾಲಿಯಾನ್‌ ಮಾತನಾಡಿ, ಮಣಿಪಾಲ ಕೆಎಂಸಿಯ ರಕ್ತನಿಧಿ ವಿಭಾಗ ರಕ್ತದಾನಿಗಳಿಗೆ ಬೇಕಾದ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಬರುವ ರಕ್ತದಾನಿಗಳಿಗೆ ವಾಹನದ ಸಮಸ್ಯೆ ಇದ್ದಲ್ಲಿ ಮಣಿಪಾಲ ಕೆಎಂಸಿ ರಕ್ತನಿಧಿ ವಿಭಾಗಕ್ಕೆ ಬಂದು ಹೋಗಲು ಮಣಿಪಾಲದಿಂದ ಸರಾಸರಿ 10 ಕಿ.ಮೀ. ವರೆಗೆ ವಾಹನದ ವ್ಯವಸ್ಥೆಯನ್ನು ಮಾಡಿರುತ್ತಾರೆ ಎಂದರು.

Advertisement

ಈ ಸಂದರ್ಭದಲ್ಲಿ ರಕ್ತ ದಾನಿಗಳಾದ ಶಿವಪ್ರಸಾದ್‌ ಇಂದಿರಾನಗರ, ಪ್ರಶಾಂತ್‌ ಶೆಟ್ಟಿಗಾರ್‌, ಸಂಜಿತ್‌, ಶರತ್‌ ಕುಮಾರ್‌, ಶೇಖರ್‌ಕುಂದರ್‌, ಆದರ್ಶ್‌ ರಾಜೀವ್‌ ನಗರ, ಶ್ರೀಕಾಂತ್‌, ನಗರಸಭೆ ಸದಸ್ಯ ಮಂಜುನಾಥ್‌ ಮಣಿಪಾಲ, ಪ್ರಾಧ್ಯಾಪಕ ಬಾಲಕೃಷ್ಣ ಮಧ್ದೋಡಿ, ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ| ಶಮಿ ಶಾಸ್ತ್ರೀ, ವಿಶ್ವೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next