Advertisement

ದಿ|ಐಶರ್ಯಾ ಆನಂದ್‌ ಜತ್ತನ್‌ 9ನೇ ಸ್ಮರಣಾರ್ಥ ರಕ್ತದಾನ ಶಿಬಿರ

06:18 PM Jan 09, 2021 | Team Udayavani |

ಮುಂಬಯಿ: ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತೀ ಗರೋಡಿ ಸೇವಾ ಟ್ರಸ್ಟ್‌ ಕಲ್ಯಾಣ್ಪುರ ಉಡುಪಿ ಇದರ ಮುಂಬಯಿ ಕಾರ್ಯಕಾರಿ ಸಮಿತಿಯ ಸದಸ್ಯ, ನಗರದ ಉದ್ಯಮಿ, ಕೊಡುಗೈದಾನಿ ಆನಂದ್‌ ಜತ್ತನ್‌ ಅವರ ನೇತೃತ್ವದಲ್ಲಿ ಅವರ ಪುತ್ರಿ ದಿ| ಐಶ್ವರ್ಯಾ ಎ. ಜತ್ತನ್‌ ಅವರ 9ನೇ ಪುಣ್ಯಸ್ಮರಣೆಯ ಅಂಗವಾಗಿ ರಕ್ತದಾನ ಶಿಬಿರವು ಜ. 4ರಂದು ನಡೆಯಿತು.

Advertisement

ಸಂಕಲ್ಪ ಬ್ಲಡ್‌ ಬ್ಯಾಂಕ್‌ ಕಲ್ಯಾಣ್‌ ಇದರ ಸಹಯೋಗದಲ್ಲಿ ಮುಂಬಯಿ ನಾಸಿಕ್‌ ರಾಷ್ಟ್ರೀಯ ಹೆದ್ದಾರಿ ಭಿವಂಡಿ ಪಡ್ಗಾದ ಹೊಟೇಲ್‌ ಪಾಲ್ವಿ ಸಭಾಗೃಹ ದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಕಸ್ತೂರಿ ಪೂಜಾರಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಪಡ್ಗಾ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಮಾಧವ್‌ ವಾಘ್ ಅವರ ತಂಡದ ನೇತೃತ್ವದಲ್ಲಿ ರಕ್ತದಾನ ಶಿಬಿರವು ನಡೆಯಿತು.

ಇದನ್ನೂ ಓದಿ:ಜ.16ರಿಂದ ಭಾರತದಲ್ಲಿ ಕೋವಿಡ್ 19 ಲಸಿಕೆ ನೀಡಲು ಆರಂಭ; ಆರೋಗ್ಯ ಸಿಬ್ಬಂದಿಗೆ ಆದ್ಯತೆ

ಆನಂದ್‌ ಜತ್ತನ್‌ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದು ಸಹಕರಿಸಿದರು. ಶಿಬಿರದಲ್ಲಿ ರೂಪೇಶ್‌ ಪೂಜಾರಿ, ಹರೀಶ್‌ ಜತನ್‌, ಸುಶಾಂತ್‌ ಪೂಜಾರಿ, ಪ್ರೇಮನಾಥ್‌ ಪೂಜಾರಿ, ವಿಷ್ಣು ಪೂಜಾರಿ, ಸ್ಥಾನೀಯ ಅನೇಕರು, ಹೊಟೇಲ್‌ ಪಾಲ್ವಿ ಸಿಬಂದಿ ಮತ್ತು ಬಂಧು-ಮಿತ್ರರು, ಹಿತಚಿಂತಕರು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನಗೈದರು. ಶಿಬಿರದಲ್ಲಿ 40 ಯೂನಿಟ್‌ ಗಳಷ್ಟು ರಕ್ತ ಸಂಗ್ರಹಿಸಲಾಗಿತ್ತು. ವೈದ್ಯಾಧಿಕಾರಿ ಡಾ| ವಾಘ್ ಅವರು ಸಹಕರಿಸಿದ ಎಲ್ಲರಿಗೂ ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next