Advertisement

ಬಿಬಿಎಂಪಿ ಬಜೆಟ್‌ ತಡೆಹಿಡಿದಿದ್ದು ಸರಿಯಲ್ಲ

01:16 AM Aug 11, 2019 | Lakshmi GovindaRaj |

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಬಜೆಟ್‌ ಅನ್ನು ಏಕೆ ತಡೆ ಹಿಡಿದಿದ್ದಾರೋ ಗೊತ್ತಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Advertisement

ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಎಲ್ಲ ಪಕ್ಷಗಳ ಸದಸ್ಯರು ಚರ್ಚೆ ಮಾಡಿ 13,500 ಕೋಟಿ ರೂ. ಬಜೆಟ್‌ ಸಿದ್ಧಪಡಿಸಿದ್ದರು. ಅದನ್ನು ಸರ್ಕಾರ ಪರಿಶೀಲನೆ ಮಾಡಿ 11,500 ಕೋಟಿ ರೂ. ಬಜೆಟ್‌ಗೆ ಒಪ್ಪಿಗೆ ನೀಡಿತ್ತು. ನಾವು ಯಾವುದನ್ನೂ ಕಾನೂನು ಬಾಹಿರವಾಗಿ ಮಾಡಿರಲಿಲ್ಲ. ಆದರೂ ಮುಖ್ಯಮಂತ್ರಿಗಳು ವಿನಾಕಾರಣ ಬಜೆಟ್‌ ತಡೆಹಿಡಿದಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next