Advertisement

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ‌ ನಿಯೋಜನೆ

12:16 PM Mar 25, 2017 | Team Udayavani |

ಮೈಸೂರು: ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಕಳಲೆ ಎನ್‌.ಕೇಶವಮೂರ್ತಿ ಪರ ಮತಯಾಚನೆಗಾಗಿ ಕಾಂಗ್ರೆಸ್‌ನಿಂದ ಜಿಲ್ಲೆಯ ವಿವಿಧ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷಗಳನ್ನು ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಜಿಪಂ ವ್ಯಾಪ್ತಿಗೆ ನಿಯೋಜನೆ ಮಾಡಿದೆ. 

Advertisement

ದೊಡ್ಡ ಕವಲಂದೆ ಜಿಪಂ ಕ್ಷೇತ್ರಕ್ಕೆ ತಿ.ನರಸೀಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಟಿ.ಎಚ್‌.ಮಂಜುನಾಥ್‌ ಹಾಗೂ ಬನ್ನೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರವಿಂದ್ರಕುಮಾರ್‌, ಬದನವಾಳು ಜಿಪಂ ಕ್ಷೇತ್ರಕ್ಕೆ ತಗಡೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಂಗಸ್ವಾಮಿ ಹಾಗೂ ವರುಣಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಮುದ್ದೇಗೌಡ, ಹೆಗ್ಗಡಹಳ್ಳಿ ಜಿಪಂ ಕ್ಷೇತ್ರಕ್ಕೆ ಚಾಮುಂಡೇಶ್ವರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಉಮಾಶಂಕರ್‌ ಹಾಗೂ

ಇಲವಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಎಸ್‌.ಸಿದ್ದರಾಜು, ಕಳಲೆ ಜಿಪಂ ಕ್ಷೇತ್ರಕ್ಕೆ ಎಚ್‌.ಡಿ.ಕೋಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಏಜಾಜ್‌ ಪಾಷ ಹಾಗೂ ಸರಗೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಾದಪ್ಪ, ಹುರ ಜಿಪಂ ಕ್ಷೇತ್ರಕ್ಕೆ ಹುಣಸೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜೇಗೌಡ, ಬಿಳಿಕೆರೆ ಬ್ಲಾಕ್‌ ಅಧ್ಯಕ್ಷ ಟಿ.ವಿ.ನಾರಾಯಣ ಹಾಗೂ ಹುಣಸೂರು ನಗರ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌.ಶಿವಯ್ಯ,

ಹುಲ್ಲಹಳ್ಳಿ ಜಿಪಂ ಕ್ಷೇತ್ರಕ್ಕೆ ಕೆ.ಆರ್‌.ನಗರ ಬ್ಲಾಕ್‌ ಅಧ್ಯಕ್ಷ ಎಂ.ಎಸ್‌.ಮಹದೇವ ಹಾಗೂ ಸಾಲಿಗ್ರಾಮ ಬ್ಲಾಕ್‌ ಅಧ್ಯಕ್ಷ ಉದಯಶಂಕರ್‌, ನಂಜನಗೂಡು ನಗರಸಭೆ ವ್ಯಾಪ್ತಿಗೆ ಪಿರಿಯಾಪಟ್ಟಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಾನ್ಸೂನ್‌ ಚಂದ್ರು ಹಾಗೂ ಬೆಟ್ಟದಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕುಂಜಪ್ಪ ಕಾರ್ನಾಡ್‌ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌ ನಿಯೋಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next